Sunday, September 8, 2024

Latest Posts

ಯಡಿಯೂರಪ್ಪ ಅತ್ತಿದ್ದಕ್ಕೆ ಕಾರಣ ಕೊಡಿ

- Advertisement -

www.karnatakatv.net :ಹುಬ್ಬಳ್ಳಿ: ರಾಜ್ಯದಲ್ಲಿ ಉತ್ತಮ ಕೆಲಸಗಳನ್ನು ಮಾಡಿದೆ ಅಂತ ಹೇಳಿಕೊಳ್ತಿರೋ ಬಿಜೆಪಿ, ಹಿಂದಿನ ಸಿಎಂ ಯಡಿಯೂರಪ್ಪನವರನ್ನು ಬದಲಾಯಿಸಿದ್ದೇಕೆ. ಇದಕ್ಕೆ ಕಾರಣ ಕೊಡಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. 

ಹುಬ್ಬಳ್ಳಿ ನಗರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಅವಳಿ ನಗರ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಮಾಡ್ತೀವಿ ಅಂತ ಹಿಂದೆಲ್ಲಾ ನೀಡಿದ್ದ ಭರವಸೆ ಕೇವಲ ಪ್ರಣಾಳಿಕೆಗೆ ಮಾತ್ರ ಸೀಮಿತವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅಲ್ಲದೆ ಕಳೆದ 15 ವರ್ಷಗಳಿಂದ ಹುಬ್ಬಳ್ಳಿ ನಗರ ಪಾಲಿಕೆ ಚುಕ್ಕಾಣಿ ಹಿಡಿದಿರೋ ಬಿಜೆಪಿ ಜನರ ಬಳಿ ಅಭಿವೃದ್ಧಿ ಬಗ್ಗೆ ಸುಳ್ಳಿನ ಭರವಸೆ ನೀಡುತ್ತಾ ಜನರ ದಾರಿ ತಪ್ಪಿಸುತ್ತಿದೆ. ಜನರು ನಿಮಗೇಕೆ ಮತ ಹಾಕಬೇಕು ಅಂತ ಪ್ರಶ್ನಿಸೋ ಮೂಲಕ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ರು.

ಇನ್ನು ಅವಳಿ ನಗರದ ರಸ್ತೆ ಗುಂಡಿಗಳ ನಗರ, ಈ ರಸ್ತೆಗಳಿಗಿಳಿದ್ರೆ ಯಾರೂ ಡ್ಯಾನ್ಸ್ ಕಲೀಬೇಕಿಲ್ಲ, ರಸ್ತೆಗಳೇ ಡ್ಯಾನ್ಸ್ ಹೇಳಿಕೊಡುತ್ತವೆ ಅಂತ ಇದೇ ವೇಳೆ ಶಿವಕುಮಾರ್ ವ್ಯಂಗ್ಯವಾಡಿದ್ರು. ಇನ್ನು ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಜನರು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಅಂತ ಡಿಕೆಶಿ ಮತದಾರರಲ್ಲಿ ಮನವಿ ಮಾಡಿದ್ರು.

ಬಿಜೆಪಿ ನಂಬಿದ್ದಕ್ಕೆ ಭ್ರಷ್ಟಾಚಾರದಲ್ಲಿ ರಾಜ್ಯವೇ ನಂಬರ್ ಒನ್ ಆಗಿದೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಒಳ್ಳೇ ಸಿಎಂ ಅಂತ ಹೇಳ್ತಿದ್ರು, ಆದ್ರೂ ಅವರನ್ನ ಬದಲಾಯಿಸಿದ್ದ್ಯಾಕೆ. ಅವರು ಪದತ್ಯಾಗ ಮಾಡುವಾಗ ಕಣ್ಣೀರಿಟ್ಟಿದ್ದು ಯಾಕೆ ಅಂತ ಇದೇ ವೇಳೆ ಡಿಕೆಶಿ ಪ್ರಶ್ನಸಿದ್ರು.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss