ಇಂದಿನಿಂದ ಆರಂಭವಾಗಿರೋ ಸಂಸತ್ ಮುಂಗಾರು ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಾತಿನ ಜಟಾಪಟಿ ಜೋರಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನ ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಫುಲ್ ಗರಂ ಆದರು.
ಪ್ರಶ್ನಾವಳಿ ಅವಧಿ ಎನ್ನೋದು ಪಾರ್ಲಿಮೆಂಟ್ನ ಚಿನ್ನದ ಅವಧಿಯಿದ್ದಂತೆ . ಕರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜನತೆ ಇರೋವಾಗ ಈ ಪ್ರಶ್ನಾವಳಿ ಅವಧಿಯನ್ನೇ ಮೊಟಕುಗೊಳಿಸಿದ್ರೆ ಹೇಗೆ ಎಂದು ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸಂಸದ ಪ್ರಹ್ಲಾದ್ ಜೋಶಿ, ಕೆಲ ದಿನಗಳ ಹಿಂದಷ್ಟೇ ಸದನಕ್ಕೆ ಸೇರೊದಕ್ಕೂ ಹಿಂದೆ ಮುಂದೆ ನೋಡ್ತಿದ್ದ ನಾವು ಇದೀಗ 800-850 ಮಂದಿ ಒಟ್ಟಿಗೆ ಸೇರಿದ್ದೇವೆ.ನಾವು ಚರ್ಚೆಯಿಂದ ತಪ್ಪಿಸಿಕೊಂಡು ಓಡುತ್ತಿಲ್ಲ. ಚರ್ಚೆಗೆ ನಮ್ಮ ಸರ್ಕಾರ ಎಂದಿಗೂ ಸಿದ್ಧ ಅಂತಾ ಹೇಳಿದ್ರು.
ಬಳಿಕ ಮಾತನಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಅತ್ಯಂತ ಕಠಿಣ ಪರಿಸ್ಥಿತಿಯ ನಡುವೆಯೂ ನಾವು ಅಧಿವೇಶನ ನಡೆಸುತ್ತಿದ್ದೇವೆ. ಹೀಗಾಗಿ ಪ್ರಶ್ನಾವಳಿ ಅವಧಿ ರದ್ದು ಮಾಡಿದ್ದು ಹಾಗೂ ಶೂನ್ಯ ಅವಧಿಯನ್ನ 30 ನಿಮಿಷ ಮಾಡಿರೋದಕ್ಕೆ ಸಹಕರಿಸಿ ಅಂತಾ ಮನವಿ ಮಾಡಿದ್ರು.