- Advertisement -
State News:
March:01: ಶೇ 17 ರಷ್ಟು ವೇತನ ಹೆಚ್ಚಳದ ಬೆನ್ನಲ್ಲೇ ಮುಷ್ಕರದಲ್ಲಿ ನಿರತರಾಗಿದ್ದ ಸರಕಾರಿ ನೌಕರರು ಇದೀಗ ತಮ್ಮ ಪ್ರತಿಭಟನೆಯನ್ನು ವಾಪಸ್ಸು ಪಡೆಯುವ ನಿರ್ಧಾರ ಮಾಡಿದ್ದಾರೆ. ಸಿಎಂ ಹಾಗು ಅನೇಕ ನಾಯಕರ ಜೊತೆಗಿನ ಸರಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ ಸಭೆ ಬಳಿಕ ಸಿಎಂ ಬೊಮ್ಮಾಯಿ ಶೇಕಡಾ 17 ರಷ್ಟು ವೇತನ ಹೆಚ್ಚಿಸುವ ನಿರ್ಧಾರ ಮಾಡಿದರು. ಈ ಹಿನ್ನಲೆ ಇದೀಗ ಸರಕಾರಿ ನೌಕರರು ಮುಷ್ಕರವನ್ನು ಇಂಪಡೆದಿದ್ದಾರೆ. ಬೆಳಗ್ಗಿನಿಂದ ಅನೇಕ ಸರಕಾರಿ ಸೇವೆಗಳಲ್ಲಿ ತೊಂದರೆಯಾದ ಕಾರಣ ಇದನ್ನು ಮನಗಂಡ ಸರಕಾರ ವೇತನ ಹೆಚ್ಚಿಸುವ ನಿರ್ಧಾರ ಮಾಡಿ ಇದೀಗ ಸಂದಿಗ್ಧ ಪರಿಸ್ಥಿತಿಯನ್ನು ಸರಕಾರ ನಿವಾರಿಸಿದೆ. ಎಪ್ರಿಲ್ 1ರಂದು ನೂತನ ಆದೇಶ ಜಾರಿಯಾಗುವುದು ಎನ್ನಲಾಗಿದೆ.
ಶೇ.17ರಷ್ಟು ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರ ಮಧ್ಯಂತರ ಪರಿಹಾರ ಘೋಷಣೆ
- Advertisement -