Saturday, October 19, 2024

Latest Posts

ಶಾಸಕನ ಮಗನ ಮಾದರಿ ಕಾರ್ಯಕ್ಕೆ ಜನತೆ ಫುಲ್ ಫಿದಾ…!

- Advertisement -

Gubbi News:

ಗುಬ್ಬಿ ಕ್ಷೇತ್ರದಲ್ಲಿ ಒಂದ್ ಕಡೆ ರಾಜಕೀಯ ರಣರಂಗ ಜೋರಾಗಿದೆ. ಈ ನಡುವೆ, ಗುಬ್ಬಿ ಶಾಸಕ ಶ್ರೀನಿವಾಸ್ ಮಗ, ನಟ ದುಷ್ಯಂತ್ ಮಾನವೀಯತೆ ಮೆರೆದಿದ್ದು, ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.ಇತ್ತೀಚೆಗಷ್ಟೇ, ಗುಬ್ಬಿ ತಾಲೂಕಿನ ಹುಣಸೇಪಾಳ್ಯ ಗೇಟ್ ಬಳಿ ಅಪಘಾತವಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ರು. ಚಿಕ್ಕನಾಯಕನಹಳ್ಳಿಯ ಧನಂಜಯ್ ಎಂಬುವವರು, ಹುಣಸೇಪಾಳ್ಯ ಗೇಟ್ ಬಳಿ ವಾಹನ ಅಪಘಾತವಾಗಿ ರಸ್ತೆಯ ನರಳಾಡುತ್ತಿದ್ರು.

ಈ ವೇಳೆ ಗುಬ್ಬಿ ಶಾಸಕ ವಾಸು ಅವರ ಮಗ, ನಟ ದುಶ್ಯಂತ್ ಶ್ರೀನಿವಾಸ್ ಇದೇ ಮಾರ್ಗವಾಗಿ ಸಂಚರಿಸ್ತಿದ್ರು. ಘಟನೆ ನೋಡಿದ ಕೂಡಲೇ, ತಮ್ಮ ವಾಹನ ನಿಲ್ಲಿಸಿ, ಗಾಯಾಳು ಧನಂಜಯ ಸ್ಥಿತಿ ಗಂಭೀರವಾಗಿರತೋದನ್ನ ಗಮನಿಸಿ, ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ತಮ್ಮ ವಾಹನದಲ್ಲೇ ಚೇಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು ನಟ ದುಷ್ಯಂತ. ಬಳಿಕ ಡಿ.ಎಚ್.ಒ ಗೆ ಕರೆ ಮಾಡಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ‌ನೀಡಲು ಸನ್ನದ್ಧರಿರುವಂತೆ ಸೂಚಿಸಿ, ಚೇಳೂರಿನಿಂದ ತುಮಕೂರು ಆಸ್ಪತ್ರೆಗೆ ಕರೆತಂದರು.

ಧನಂಜಯ ಅವರಿಗೆ ಸೂಕ್ತ ಚಿಕಿತ್ಸೆ ದೊರಕುವವರೆಗೆ ಅಲ್ಲಿಯೇ ಇದ್ದು ಧೈರ್ಯ ತುಂಬಿದರು ದುಷ್ಯಂತ್ ಶ್ರೀನಿವಾಸ್. ತುಸು ಚೇತರಿಸಿಕೊಂಡ ನಂತರ ಯಾವುದೇ ಸಹಾಯ ಬೇಕಿದ್ದಲ್ಲಿ‌ ಕರೆ ಮಾಡುವಂತೆ ದುಷ್ಯಂತ್ ತಮ್ಮ ಮೊಬೈಲ್ ನಂಬರ್ ಅನ್ನು ಗಾಯಾಳುವಿಗೆ ನೀಡಿ, ವೈದ್ಯರ ಜೊತೆ ಮಾತ್ನಾಡಿ ತೆರಳಿದ್ರು.ಶಾಸಕ ಶ್ರೀನಿವಾಸ್ ಅವರ ಮಗ ದುಷ್ಯಂತ್ ಕಾರ್ಯಕ್ಕೆ ಇಡೀ ಕ್ಷೇತ್ರದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ದುಷ್ಯಂತ್ ಮಾನವೀಯತೆಗೆ ಫಿದಾ ಆಗಿದ್ದಾರೆ.

ನ್ಯೂಸ್ ಬ್ಯುರೋ, ಕರ್ನಾಟಕ ಟಿವಿ, ಗುಬ್ಬಿ..

ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ರಣಕಹಳೆ..!

.ಮಾಜಿ ಸಚಿವ ಎ.ಮಂಜು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೇಳಿಕೆ

ಕೊಡಗು: ಗಡಿಪಾರು ತಡೆಯೊಡ್ಡಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

- Advertisement -

Latest Posts

Don't Miss