Tuesday, June 3, 2025

Latest Posts

ಹಾಸದಲ್ಲಿ ಶಾಸಕ ಪ್ರೀತಮ್ ಜೆ. ಗೌಡರ್ 41ನೇ ಹುಟ್ಟುಹಬ್ಬ ಆಚರಣೆ : ಗಣೇಶ, ನವಗ್ರಹ, ಜಗನ್ಮೋಹಿನಿ ಜಪ ಮಂತ್ರ ಹೋಮದ ಜೊತೆ ಅನ್ನದಾನ

- Advertisement -

ಹಾಸನ: ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ 41ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀ ಸೀತರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಸೋಮವಾರ ಗಣೇಶ, ನವಗ್ರಹ, ಜಗನ್ಮೋಹಿನಿ ಜಪ ಮಂತ್ರ ಹೋಮವನ್ನು ನಡೆಸಿ ಅನ್ನದಾನ ನೆರವೇರಿಸಲಾಯಿತು.

ಕೆಂಪೇಗೌಡ ಪ್ರತಿಮೆ ಪಕ್ಕದಲ್ಲೇ ಹೆಚ್.ಡಿ.ದೇವೇಗೌಡರ ಪ್ರತಿಮೆ ನಿರ್ಮಿಸಬೇಕು : ಹಾಸನದಲ್ಲಿ ಎಎಪಿ ಮುಖಂಡ ಅಗಿಲೆ ಯೋಗೀಶ್ ಒತ್ತಾಯ

ನಂತರ ನಗರಸಭೆ ಅಧ್ಯಕ್ಷರು ಆರ್. ಮೋಹನ್, ನಗರಾಧ್ಯಕ್ಷ ವೇಣುಗೋಪಾಲ್ ಅವರ ಮಾತನಾಡಿ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ 41ನೇ ವರ್ಷದ ಜನ್ಮದಿನದ ಅಂಗವಾಗಿ ಶ್ರೀಸೀತರಾಮಾಂಜನೇಯ ದೇವಾಲಯದ ಆವರಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿ ನಡೆಸಲಾಯಿತು ಎಂದರು.ಹಾಗೂ ಶಾಸಕರ ತಂದೆ ತಾಯಿ ಸೇರಿ ಶಾಸಕರಿಗೆ ಭಗವಂತ ಆಯಸ್ಸು, ಆರೋಗ್ಯ, ಶ್ರೇಯಸ್ಸನ್ನು ಹಾಗೂ ಯಶಸ್ಸನ್ನು ಕರುಣಿಸಲಿ ಎಂದು ಹೋಮ ಮಾಡಿಸಲಾಯಿತು.

ಸಿದ್ದರಾಮಯ್ಯ ಅಂತಹ ನಾಯಕರು ಕ್ಷೇತ್ರ ಹುಡುಕಾಟ ನಡೆಸುವುದು ಶೋಚನೀಯ ಸಂಗತಿ : ಕೋಲಾರದಲ್ಲಿ ಸಂಸದ ಮುನಿಸ್ವಾಮಿ ವಾಗ್ದಾಳಿ

ಗಣೇಶ, ನವಗ್ರಹ, ಜಗನ್ಮೋಹಿನಿ ಜಪ ಮಂತ್ರ ಹೋಮವನ್ನು ನಡೆಸಿ ಅನ್ನದಾನ ನೆರವೇರಿಸಲಾಗಿದೆ ಎಂದರು. ಇನ್ನು ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಗೆಲುವು ಪಡೆದು ಶಾಸಕರಾಗಿ, ಸಚಿವರಾಗಿ ಹಾಗೂ ಮುಖ್ಯಮಂತ್ರಿಗಳಾಗಿ ಅಧಿಕಾರ ಪಡೆಯಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಈ ವೇಳೆ ಹುಡಾ ಅಧ್ಯಕ್ಷರಾದ ಲಲಾಟ್ ಮೂರ್ತಿ, ನಿರ್ದೇಶಕ ಶರತ್ ಕುಮಾರ್, ಪಕ್ಷದ ಮುಖಂಡರಾದ ಎಸ್.ಡಿ. ಚಂದ್ರು, ಅನ್ನಪೂರ್ಣ ಇತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಅಂತಹ ನಾಯಕರು ಕ್ಷೇತ್ರ ಹುಡುಕಾಟ ನಡೆಸುವುದು ಶೋಚನೀಯ ಸಂಗತಿ : ಕೋಲಾರದಲ್ಲಿ ಸಂಸದ ಮುನಿಸ್ವಾಮಿ ವಾಗ್ದಾಳಿ

ಕೆಂಪೇಗೌಡ ಪ್ರತಿಮೆ ಪಕ್ಕದಲ್ಲೇ ಹೆಚ್.ಡಿ.ದೇವೇಗೌಡರ ಪ್ರತಿಮೆ ನಿರ್ಮಿಸಬೇಕು : ಹಾಸನದಲ್ಲಿ ಎಎಪಿ ಮುಖಂಡ ಅಗಿಲೆ ಯೋಗೀಶ್ ಒತ್ತಾಯ

- Advertisement -

Latest Posts

Don't Miss