Thursday, June 19, 2025

Latest Posts

ಕಳಪೆ ಕಾಮಗಾರಿ ಮಾಡಿ ಉದ್ಘಾಟನೆ ಮಾಡಿದ ಆರೋಪ

- Advertisement -

ಹಾಸನ :

ಪೂರ್ಣ ಕಾಮಗಾರಿಗಳು ಆಗದೆ ಇದ್ದರು ಜನರಿಗೆ ವಂಚಿಸಿ ತಮ್ಮ ರಾಜಕೀಯ ಹಿತಾಸಕ್ತಿಗೆ ಶಾಸಕ ಪ್ರೀತಂ ಗೌಡ ಅವರು ನಗರದಲ್ಲಿ ಅನೇಕ ಕಾಮಗಾರಿಗಳನ್ನು ಉದ್ಘಾಟಿಸಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅಗಿಲೆ ಯೋಗೀಶ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು 50 ಸಾವಿರ ಲೀಡ್ ನಲ್ಲಿ ಗೆಲ್ಲುವೆ ಇಲ್ಲವೇ ಮರು ಚುನಾವಣೆ ಎದುರಿಸುವ ಎಂಬ ಹೇಳಿಕೆ ನೀಡುವ ಶಾಸಕ ಪ್ರೀತಂ ಗೌಡ ಅಷ್ಟ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಬೆಳ್ಳಿ ಎಂದು ಹೇಳಿ ಲೋಹದ ಲಕ್ಷ್ಮಿ ಫೋಟೋ ನೀಡಿ ವಂಚಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ಆದೇಶ ದಿಕ್ಕರಿಸಿ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಕಾಮಗಾರಿಗೆ ಶಾಸಕ ಗೌಡ ಅವರು ಹಾಕಿಸಿಕೊಂಡಿರುವ ಫ್ಲೆಕ್ಸ್, ಮತ್ತು ಬ್ಯಾನರ್ ಹಾಗೂ ನಾಮ ಫಲಕಗಳನ್ನು ಆಮ್ ಆದ್ಮಿ ಪಕ್ಷದ ವತಿಯಿಂದ ತೆರವು ಗೊಳಿಸಲಿದ್ದೇವೆ ಎಂದು ಎಚ್ಚರಿಸಿದರು

ಶಾಸಕರು ಅರ್ಧ ಆಗಿರುವ ಕಾಮಗಾರಿಗಳಿಗೆ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದ್ದಾರೆ ಎಂಬ ವಿಷಯವನ್ನು ಮನಗಂಡು ಇಬ್ಬರು ಸಚಿವರನ್ನು ಹೊರತು ಪಡಿಸಿ ಮುಖ್ಯಮಂತ್ರಿ ಆದಿಯಾಗಿ ಯಾವುದೇ ಸಚಿವರು ಕಾರ್ಯಕ್ರಮಕ್ಕೆ ಆಗಮಿಸಿಲ್ಲ, ಹಾಸನ ಕ್ಷೇತ್ರದ ಜನರು ಇನ್ನಾದರೂ ಎಚ್ಚೆತ್ತುಕೊಂಡು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಅಗತ್ಯ ಇದೇ ಎಂದರು

ಚುನಾವಣೆಯಲ್ಲಿ ಸೋಲುವ ಭೀತಿಯಿಂದ, ಹಾಗೂ ಮುಂದಿನ ಭಾರಿ ತಾನು ಶಾಸಕನಾಗಿ ಆಯ್ಕೆಯಾಗುವುದಿಲ್ಲ ಎಂಬ ವಿಷಯವನ್ನು ಮನಗಂಡು ಅರ್ಧ ಆಗಿರುವ ಎಲ್ಲಾ ಕಾಮಗಾರಿಗೆ ಅಡಿಗಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ, ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕರ ಹಣದಲ್ಲಿ ನಿರ್ಮಿಸಿರುವ ಕಾಮಗಾರಿಗೆ ಅಳವಡಿಸಿರುವ ನಾಮ ಫಲಕವನ್ನು ತೆರವು ಗೊಳಿಸಿ ನಿರ್ಧಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಇಲ್ಲವಾದ್ರೆ ಜಿಲ್ಲಾಡಳಿತ ತಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರು ಎದೆಗುಂದದೆ ನಾವೇ ತೆರವು ಮಾಡಲಿದ್ದೇವೆ ಎಂದು ಎಚ್ಚರಿಸಿದರು

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಆನಂದ್, ಧಸ್ಥಗಿರ್, ರೆಹಮತ್, ಸಫಿ, ಇತರರು ಇದ್ದರು.

ಸಾರಿಗೆ ಇಲಾಖೆಯ ಸಿಬ್ಬಂದಿಗೆ ಕೈ ಮುಗುದ ವಿದೇಶಿ ಪ್ರಜೆ ಯಾಕೆ ನೋಡಿ ?

ಇಬ್ಬರ ಜಗಳ ಮೂರನೆಯವರಿಗೆ ಲಾಭ -ಜೆಡಿಎಸ್ ಟಿಕೆಟ್ ಫೈಟ್

ವಿಮಾನ ನಿಲ್ದಾಣದಲ್ಲಿ ಚಪ್ಪಲಿಯಲ್ಲಿ ಚಿನ್ನ ಪತ್ತೆ- ಅಕ್ರಮ ಸಾಗಾಣೆ

- Advertisement -

Latest Posts

Don't Miss