Wednesday, October 22, 2025

Latest Posts

ಒಣದ್ರಾಕ್ಷಿ ನೆನೆಸಿಟ್ಟ ನೀರಿನ್ನು ಕುಡಿದು ಆರೋಗ್ಯವಾಗಿರಿ.!

- Advertisement -

ಡ್ರೈ ಫ್ರೂಟ್ಸ್ ಅಂತ ಬಂದಾಗ ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡ್ತೀವಿ. ಒಣದ್ರಾಕ್ಷಿಯನ್ನು ಮರೆತೇ ಬಿಡ್ತೀವಿ. ಆದರೆ ಒಣದ್ರಾಕ್ಷಿಯಲ್ಲಿರುವಂತಹ ಆರೋಗ್ಯ ಲಾಭಗಳನ್ನ ನೀವು ತಿಳಿದರೆ ಖಂಡಿತವಾಗಿಯೂ ಇದನ್ನ ತಪ್ಪದೇ ತಿನ್ನುವಿರಿ.

ಒಣದ್ರಾಕ್ಷಿ ಅಂದರೆ ನಮಗೆ ನೆನಪಾಗೋದು ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸುವ ಒಣಫಲ ಎಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ಒಣ ದ್ರಾಕ್ಷಿಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೊದಲ ಆಹಾರವಾಗಿ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ.

ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸತತವಾಗಿ ನಾಲ್ಕು ದಿನ ನಿತ್ಯ ಸೇವಿಸಿದರೆ ಕರುಳುಗಳು ಸ್ವಚ್ಛವಾಗುವುದರ ಜೊತೆಗೆ ಹೃದಯ ಮತ್ತು ಯಕೃತ್ ನ ತೊಂದರೆಗಳು ನಿವಾರಣೆಯಾಗುತ್ತದೆ.

ಪ್ರತಿ ನಿತ್ಯ ಖಾಲಿ ಹೊಟ್ಟೆಗೆ ಒಣ ದ್ರಾಕ್ಷಿಯನ್ನು ನೆನೆಸಿಟ್ಟ ನೀರಿನ್ನು ಕುಡಿಯುವುದರಿಂದ ರಕ್ತ ಶುದ್ದೀಕರಣಗೊಳ್ಳುವ ಜೊತೆಗೇ ಯಕೃತ್‌ನ ಕಾರ್ಯ ಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ. ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚುವುದರ ಜೊತೆಗೆ ರಕ್ತದ ಶುದ್ಧೀಕರಣ ಕೂಡ ಆಗುತ್ತದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

 

- Advertisement -

Latest Posts

Don't Miss