Haveri News: ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದ ತಂಡ ಖಾಸಗಿಯಾಗಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದೆ. ಭಾರತೀಯ ಹವಾಮಾನ ಇಲಾಖೆ ಮಳೆ ಕೊರೆತೆ ಇದೆ ಎಂದು ಹೇಳಿದ ಹಿನ್ನಲೆ ಈ ಕೃತಕ ಮೋಡ ಬಿತ್ತನೆ ಮಾಡಲು ಮುಂದಾಗಿದೆ.
ಮೋಡ ಬಿತ್ತನೆಯಿಂದ ಮಳೆಯಾಗಲಿದೆ ಎಂದು ವಿಜ್ಞಾನಿಗಳೇ ಹೇಳುತ್ತಿದ್ದು ಜಿಲ್ಲೆಯ ರೈತರಿಗಾಗಿ ನಾವು ಖಾಸಗಿಯಾಗಿ ಮೋಡ ಬಿತ್ತನೆಯನ್ನ ಮಾಡುತ್ತಿವೆ ಎಂದು ಪ್ರಕಾಶ್ ಕೋಳಿವಾಡ ಹೇಳಿದ್ದಾರೆ.
ಪ್ರಕಾಶ್ ಕೋಳಿವಾಡಗೆ ಸೇರಿದ ಪಿಕೆಕೆ ಎಂಬ ಎನ್ಜಿಓ ಮೋಡ ಬಿತ್ತನೆಗೆ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯಿಂದ ಅನುಮತಿಪಡೆದುಕೊಂಡಿದ್ದು, ಕೇಂದ್ರ ವಿಮಾನಯಾನ ಇಲಾಖೆಯ ಅನುಮತಿ ಪಡೆದುಕೊಳ್ಳಲು ಈ ತಂಡ ಟೀಂ ರಾಜ್ಯ ರಾಜಧಾನಿಗೆ ತೆರಳಿದ್ದು, ದೆಹಲಿಯಲ್ಲಿ ಅನುಮತಿ ದೊರೆತ ಬಳಿಕ ಹಾವೇರಿಯಲ್ಲಿ ಮೋಡ ಬಿತ್ತನೆ, ನಡೆಯಲಿದೆ.
Free Bus : ಹೆಸರು ಲಕ್ಷ್ಮೀ …!ಲಿಂಗ ಪುರುಷ..?! ಕಂಡಕ್ಟರ್ ಕಕ್ಕಾಬಿಕ್ಕಿ..!