Wednesday, June 18, 2025

Latest Posts

Buntwala : ಭೀಕರ ಮಳೆಯಿಂದಾಗಿ ಅನೇಕ ಮನೆಗಳಿಗೆ ಅಪಾರ ಹಾನಿ

- Advertisement -

Karavali News: ಕರಾವಳಿಯಾದ್ಯಂದ ಸುರಿಯುತ್ತಿರುವ ಭೀಕರ ಮಳೆಗೆ ಅಪಾರ ಮನೆಗಳಿಗೆ ಹಾನಿಯಾಗಿವೆ. ಬಂಟ್ವಾಳ ತಾಲೂಕಿನ ಅನೇಕ ಮನೆಗಳಿಗೆ ಹಾನಿ ಸಂಭವಿಸಿವೆ.

ಪುಣಚ ಗ್ರಾಮದ ಬಡೆಕನಡ್ಕ ಎಂಬಲ್ಲಿ ಶ್ರೀ ಚೋಮ ಎಂಬವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಪ್ರಭಾವತಿ ಎಂಬುವರ ಮನೆ ಹಾನಿಯಾಗಿದೆ, ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಶ್ರೀ ರಾಮಪ್ಪ ಆಚಾರ್ಯ ಎಂಬವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಬಡಗ ಬೆಳ್ಳೂರು ಗ್ರಾಮದ ನಂದಪ್ಪ ಪೂಜಾರಿ ಯವರ ವಾಸ್ತವ್ಯ ದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ ಎನ್ನಲಾಗಿದೆ.

ಕೇಪು ಗ್ರಾಮದ ಕುಕ್ಕೆಬೆಟ್ಟು ಎಂಬಲ್ಲಿ ಸಂಜೀವ ಪೂಜಾರಿ ಮನೆಯ ತಡೆಗೋಡೆ ಕುಸಿದು ಹಾನಿಯಾಗಿದೆ. ಕೊಡ್ಮಣ್ ಗ್ರಾಮದ ಕೊಡ್ಮಣ್ ಕೋಡಿ ಎಂಬಲ್ಲಿ ಸುಲೋಚನಾ ರವರ ಮನೆಗೆ ಹೊಂದಿರುವ ಸ್ನಾನಗೃಹ ಹಾಗೂ ಶೌಚಾಲಯಕ್ಕೆ ಮರ ಬಿದ್ದು ಸದ್ರಿ ಕಟ್ಟಡದ ಗೋಡೆ ಹಾಗೂ ಸಿಮೆಂಟ್ ಶೀಟು ಹಾನಿಯಾಗಿದೆ. ಸರಪಾಡಿ ಗ್ರಾಮದ ಮುದಿಮರ ಎಂಬಲ್ಲಿ ಯೋಗೀಶ್ ಎಂಬುವವರ ಮನೆಯ ಮೇಲೆ ಶನಿವಾರ ಮುಂಜಾನೆ ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು ನಷ್ಟ ಸಂಭವಿಸಿದೆ. ಹೀಗೆ ಅನೇಕ ಮನೆಗಳಿಗೆ ಮಳೆಯಿಂದಾಗಿ ಅಪಾರ ಹಾನಿಯಾಗಿವೆ.

Evm Machine : ಎಂಜಿನಿಯರ್ ಮನೆಯಲ್ಲಿ ಲಭ್ಯವಾಯಿತು ಇವಿಎಂ ಯಂತ್ರ..?!

Dk Shivakumar : ಇಂದಿರಾ ಕ್ಯಾಂಟೀನ್ ಬಿಲ್ ನೀಡಲು 500ರ ಕಂತೆ ತೆಗೆದ ಡಿಕೆಶಿ..!

C.M Nimbanna : ಕಲಘಟಗಿ ಬಿಜೆಪಿ ಮಾಜೀ ಶಾಸಕ ಸಿಎಂ ನಿಂಬಣ್ಣವರ ಸಾವು, ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ

- Advertisement -

Latest Posts

Don't Miss