ಕೊರೊನಾ ವೈರಸ್ ತೊಲಗಿ, ಜಗತ್ತಿಗೆ ಒಳಿತಾಗಲೆಂದು ಹೋಮ ಹವನ..!

ಮಂಡ್ಯ: ಈ ವರ್ಷ ಪ್ರಾರಂಭವಾಗಿದಾಗಿನಿಂದ ವಕ್ಕಿರಿಸಿದ ಕೊರೊನಾ ಇಲ್ಲಿವರೆಗೆ ಭೀತಿ ಮೂಡಿಸಿ, ಜನಜೀವನವೇ ಹಾಳಾಗುವಂತೆ ಮಾಡಿದೆ. ಈ ವರ್ಷದ ಅರ್ಧ ಭಾಗ ಕೊರೊನಾ ಭೀತಿಯಲ್ಲೇ ಜೀವನ ನಡೆಸುವಂತಾಯಿತು. ಇನ್ನಾದರೂ ಕೊರೊನಾ ತೊಲಗಿ ಜನ ನೆಮ್ಮದಿಯಿಂದಿರುವ ಹಾಗೆ ಆಗಲಿ ಎಂದು ಮಂಡ್ಯದಲ್ಲಿ ಹೋಮ ಹವನ ನಡೆಸಲಾಯಿತು.

ಮಳವಳ್ಳಿ ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಹೋಮ ಹವನ ನಡೆಸಲಾಗಿದ್ದು, ಶ್ರೀರಾಮರೂಡ ಮಠದ ಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ನಡೆದಿದೆ.

https://youtu.be/cAw4GUAs8zQ

ಕೊರೊನಾ ವೈರಸ್ ತೊಲಗಿ ಜಗತ್ತಿಗೆ ಒಳಿತಾಗಲೆಂದು ಹೋಮ ಹವನ ಮಾಡಿದ್ದು, ಮಳವಳ್ಳಿ ಪಟ್ಟಣದ ಪ್ರಮುಖ ಮುಖಂಡರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

https://youtu.be/3g0m5bkJdxA

About The Author