Thursday, April 17, 2025

Latest Posts

ಸಾರ್ವಜನಿಕರಿಗೆ ಹೊರೆಯಾಗದ ಬಜೆಟ್ ಸ್ವಾಗತಾರ್ಹ: ಕೆಸಿಸಿಐ ಅಧ್ಯಕ್ಷ ಅಭಿಮತ

- Advertisement -

Hubballi News: ಹುಬ್ಬಳ್ಳಿ: ಗ್ಯಾರಂಟಿ ಯೋಜನೆ ಅನುಷ್ಠಾನದ ಜೊತೆಗೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ಬಜೆಟ್ ಮಂಡಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಬೆಂಗಳೂರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವುದು ಕೊಂಚಮಟ್ಟಿಗೆ ಬೇಸರವನ್ನುಂಟು ಮಾಡಿದೆ ಎಂದು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಹೇಳಿದರು.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಿದ್ಧರಾಮಯ್ಯನವರು ದಾಖಲೆಯ ಬಜೆಟ್ ಮಂಡಿಸಿರುವ ಬಜೆಟ್ ನಿಜಕ್ಕೂ ಸ್ವಾಗತಾರ್ಹಾವಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೆರಿಗೆ ಹೊರೆಯಾಗದಂತೆ ವಿಶೇಷ ಅನುದಾನದ ಮೂಲಕ ಸಮತೋಲನ ಕಾಪಾಡಿಕೊಂಡು ಬಜೆಟ್ ಘೋಷಣೆ ಮಾಡಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ, ವೈದ್ಯಕೀಯ ಸೇವೆ, ಆರೋಗ್ಯ, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಬೆಂಗಳೂರಿನ ಭಾಗಕ್ಕೆ ಮಾತ್ರವೇ ಹೆಚ್ಚಿನ ಆದ್ಯತೆ ನೀಡಿದ್ದು, ಉತ್ತರ ಕರ್ನಾಟಕ ನಿರ್ಲಕ್ಷ್ಯ ತೋರಿರುವುದು ನಿಜಕ್ಕೂ ಬೇಸರ ಮೂಡಿಸಿದೆ ಎಂದರು.

ರಾಜ್ಯ ಎಂದರೇ ಬೆಂಗಳೂರು ಎಂಬುವಂತ ಮನಸ್ಥಿತಿ ಬಿಟ್ಟು ಬೆಂಗಳೂರು ಹೊರತಾಗಿಯೂ ಕೈಗಾರಿಕರಣ ಹಾಗೂ ಪ್ರವಾಸೋದ್ಯಮಕ್ಕೆ ಸರ್ಕಾರ ಆದ್ಯತೆ ನೀಡಬೇಕಿತ್ತು ಎಂದು ಅವರು ಸೂಚನೆ ನೀಡಿದರು.

ಸರ್ವರಿಗೂ ಸಮಪಾಲಿನ ಬಜೆಟ್: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರಿಗೆ ಭರ್ಜರಿ ಬಜೆಟ್…!

ಕೇಂದ್ರಕ್ಕೆ ಗೋಚರಿಸದವರಿಗೆ ರಾಜ್ಯದಿಂದ ಅನ್ನಭಾಗ್ಯ ಯೋಜನೆ..?!

- Advertisement -

Latest Posts

Don't Miss