Sunday, June 1, 2025

Latest Posts

Police: ಮಗಳಿಗಾಗಿ ಯುವಕನ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ..!

- Advertisement -

ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯ ಸಿಲ್ವರ ಟೌನ್ ದಲ್ಲಿ ಯುವಕನ ಕೊಲೆ ನಡೆದ ಕೂಗಳತೆಯಲ್ಲಿ ಇನ್ನೊಬ್ಬ ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪರಸಪ್ಪ ಡಮ್ಮರ ವಯಸ್ಸು(50)ಎಂದು ಗುರುತಿಸಲಾಗಿದೆ.

ನಿನ್ನೆ ಮೌಲಾಲಿ ವಯಸ್ಸು (24) ಎಂಬಾತನ ಕೊಲೆ ನಡೆದಿತ್ತು. ಆ ಕೊಲೆಗೆ ಸಂಬಂಧಿಸಿದಂತೆ ಗೋಕುಲ ಠಾಣಾ ಪೋಲೀಸರು ಪರಸಪ್ಪನನ್ನು ಪೋಲೀಸ ಠಾಣೆಗೆ ವಿಚಾರಣೆಗೆ ಕರೆಸಿದ್ದರು ಎನ್ನಲಾಗಿದೆ. ವಿಚಾರಣೆ ನಂತರ ಭಯಗೊಂಡ ಪರಸಪ್ಪ ಇಂದು ಬೆಳಗಿನ ಜಾವಾ ಐದು ಘಂಟೆಗೆ ರಸ್ತೆಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿವಾಹಿತ ಮಗಳ ಜೊತೆ ನಿನ್ನೆ ಕೊಲೆಯಾದ ಮೌಲಾಲಿ ಅನ್ಯೆತಿಕ ಸಂಭಂದ ಇಟ್ಟುಕೊಂಡಿದ್ದ ಎನ್ನಲಾಗಿದ್ದು ಅದಕ್ಕೆ ಅವನನ್ನು ಕೊಲೆ ಮಾಡಿ ಇಂದು ತಾನೂ ಸಹ ಆತ್ಮಹತ್ಯೆ ಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಗೋಕುಲ ಠಾಣಾ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Congress: ಕಾಂಗ್ರೆಸ್ ಸೇರಲು ಮಾಜಿ ಶಾಸಕರು ಸಿದ್ದತೆ; ಬಿಜೆಪಿಗೆ ಶೆಟ್ಟರ್ ಶಾಕ್..!

Rudrappa lamani ಬಿಜೆಪಿಯ ಮಾಜಿ ಶಾಸಕ ಕಾಂಗ್ರೆಸ್ ಸೇರೋದು ಫಿಕ್ಸ್..!

ಚಾಮರಾಜನಗರ : ಮಲೆಮಹದೇಶ್ವರನ ಆಶೀರ್ವಾದ ಪಡೆದ ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss