Sunday, June 1, 2025

Latest Posts

ರೈತರು, ಜನ‌ ಸಾಮಾನ್ಯರ ಹಿತ ಕಾಪಾಡುವ ಖಾಳಜಿ‌ ಇದ್ರೆ ಗೆಜೆಟ್ ರದ್ದುಪಡಿಸಬೇಕು: ಛಲವಾದಿ ನಾರಾಯಣಸ್ವಾಮಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ವಿಪ ವಿಪಕ್ಷ ನಾಯಕ‌ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ, ನಳೀನ್ ಕುಮಾರ ಕಟೀಲ್, ಮಾಜಿ ಸಚಿವರಾದ ಬಿಸಿ ಪಾಟೀಲ್ , ಶಂಕರಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವು ನಾಯಕರು ಸೇರಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ರಾಜ್ಯದಲ್ಲಿ ವಕ್ಫ್ ವಿಚಾರದಲ್ಲಿ ಗೊಂದಲಗಳಿವೆ. ಅನೇಕ ಜಿಲ್ಲೆಗಳ‌ ರೈತರ ಜಮೀನುಗಳನ್ನ ಕಬಳಿಸುವ ಹುನ್ನಾರ ನಡೆಯುತ್ತಿದೆ. 12ನೇ ಶತಮಾನದ ದೇವಸ್ಥಾನಗಳ‌ ಪಹಣಿಯಲ್ಲೂ ವಕ್ಫ್ ಹೆಸರು ನಮೂದು‌ ಮಾಡಲಾಗಿದೆ. ಈಗಷ್ಟೇ ಹುಬ್ಬಳ್ಳಿ ತಾಲೂಕಿನ‌ ಮಿಶ್ರಿಕೋಟಿಗೂ ಭೇಟಿ ನೀಡಿದ್ದೇವೆ. ಆ ಗ್ರಾಮದಲ್ಲೂ ಸಹ ಅನೇಕ ಆಸ್ತಿಗಳು ವಕ್ಫ ಹೆಸರು ನಮೂದು ಮಾಡಲಾಗಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಜಮೀರ್ ಅಹ್ಮದ್ ಖಾನ್ ಅವರು ಭಾಷಣ ಮಾಡುತ್ತಾರೆ. ದೇವಸ್ಥಾನಗಳು ಸೈತಾನರಿಗೆ ಕಾಣಬೇಕು ಅಂತಾ ಭಾಷಣ ಮಾಡುತ್ತಾರೆ. ಸಂವಿಧಾನವನ್ನೂ ಮೀರಿದ ಅಧಿಕಾರವನ್ನ ವಕ್ಫ್ ಗೆ ನೀಡಲಾಗಿದೆ. ವಕ್ಫ್ ಬೋರ್ಡ್ ಗೆ ಪರಮಾಧಿಕಾರ ನೀಡಲಾಗಿದೆ. ನ್ಯಾಯಾಲಯಕ್ಕೂ ಸಹ ಪ್ರಶ್ನೆ ಮಾಡದಂತಹ ಅಧಿಕಾರ ನೀಡಲಾಗಿದೆ. ಮುಖ್ಯಮಂತ್ರಿಗಳ‌ ಆದೇಶದ ಮೇಲೆಯೇ ನಾನು ಇದನ್ನೆಲ್ಲ‌ ಮಾಡುತ್ತಿದ್ದೇನೆ ಅಂತಾ ಜಮೀರ್ ಹೇಳಿದ್ದಾರೆ. ಆದ್ರೆ ಮುಖ್ಯಮಂತ್ರಿಗಳು ತಮ್ಮ ಬುಡಕ್ಕೆ ಬರುತ್ತೆ ಅಂತಾ ವಕ್ಫ್ ಆಸ್ತಿ ನೋಟೀಸ್ ಗಳನ್ನ ಹಿಂಪಡೆಯುವುದಾಗಿ ಹೇಳುತ್ತಾರೆ. ಇಂದು ಬಾರಿ ರೈತರ ಜಮೀನು ಪಹಣಿಗಳಲ್ಲಿ ವಕ್ಫ್ ಹೆಸರು ಉಲ್ಲೇಖ‌ ಆದ್ರೆ ಅದನ್ನ ವಾಪಸ್ ಬದಲಿಸಲು ಸಾಧ್ಯವಾಗಲ್ಲ.

ರೈತರನ್ನ , ಸಾಮಾನ್ಯ ಜನರನ್ನ‌ ಒಕ್ಕಲೆಬ್ಬಿಸುವ ಕೆಲಸಗಳು ಆಗಬಾರದು. ಈ‌ ಹಿನ್ನೆಲೆ‌‌ ಕೇಂದ್ರ ಸರ್ಕಾರದಿಂದ ಜಂಟಿ‌ ಸಮೀತಿ‌ ರಚನೆ ಮಾಡಿದೆ. ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ರೆ 1974 ರ ಗೆಜೆಟ್ ರದ್ದುಪಡಿಸಿ. ರೈತರ ಮೇಲೆ‌ ಜನ‌ ಸಾಮಾನ್ಯರ ಹಿತ ಕಾಪಾಡುವ ಖಾಳಜಿ‌ ಇದ್ರೆ ಗೆಜೆಟ್ ರದ್ದುಪಡಿಸಬೇಕು ಎಂದು ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss