- Advertisement -
www.karnatakatv.net: ಸಿಎಂ ಬಿಎಸ್ ವೈ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಎಲ್ಲರಲ್ಲೂ ಬೇಸರ ಮನೆ ಮಾಡಿದೆ ಹಾಗೇ ಎಲ್ಲಾ ಬಿಜೆಪಿ ವಲಸಿಗ ಸಚಿವರು ಕೂಡಾ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.


ಎಲ್ಲಾ ಸಚಿವರು ಪ್ರತ್ಯೆಕ ಪತ್ರಗಳೊಂದಿಗೆ ಸಿಎಂ ಯಡಿಯೂರಪ್ಪನವರ ಕಚೇರಿಗೆ ಹೋಗಿ ಚರ್ಚೆಯನ್ನು ಮಾಡುತ್ತಿದ್ದಾರೆ. ಆರೂ ಮಂದಿ ಸಚಿವರು ಏಕಮಾದರಿ ಪತ್ರವನ್ನು ಹಿಡಿದು ಚರ್ಚೆಗೆ ಮುಂದಾಗಿದ್ದಾರೆ. ಆ ಪತ್ರದಲ್ಲಿ ಏನಿದೆ ಎಂದು ಇನ್ನೂ ಖಚಿತವಾಗಿಲ್ಲ ಹೀಗಾಗಿ ಕೂತುಹಲ ಕೆರಳಿಸಿದ ಸಚಿವರು.. ಸಿಎಂ ಬಿಎಸ್ ವೈ ಜೋತೆ ಚರ್ಚಿಸುತ್ತಿರುವ ವಲಸಿಗ ಸಚಿವರು ಬಿ.ಸಿ ಪಾಟೀಲ್, ಡಾ. ಕೆ ಸುಧಾಕರ್, ಎಸ್.ಟಿ ಸೋಮಶೇಕರ್, ಗೋಪಾಲಯ್ಯ, ಶಿವರಾಮ್ ಹೆಬ್ಬಾಳ್, ಭೈರತಿ ಬಸವರಾಜ್.
- Advertisement -