ಹಾಸನ :ನಗರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಭಾರತ ಜೋಡೋ ಯಾತ್ರೆ ಮತ್ತು ಐಎನ್ ಡಿ ಐ ಎ ಕುರಿತು ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಜೋಡೋ ಯಾತ್ರೆ ಮಾಡಿದ್ದು ಕಾಂಗ್ರೆಸ್ ಪಕ್ಷದವರು, ಇಂಡಿಯಾ ಅಂತ ಹೆಸರು ಬದಲಾವಣೆ ಮಾಡಿದ್ದಕ್ಕೆ ಯಾಕೆ ವಿರೋಧ ಮಾಡಬೇಕು. ನಾವು ರಾಷ್ಟ್ರಗೀತೆ ಹಾಡುವಾಗ ಇಂಡಿಯಾ ಅಂತ ಹೇಳುತ್ತಿವಾ ? ಎಂದು ಪ್ರಶ್ನಿಸಿದರು. ನಾವು ಹಾಡೋದು ಜೈ ಭಾರತ ಜನನಿಯ ತನುಜಾತೆ ಅಂತ ಎಂದು ಹೇಳಿದರು. ಬೆಂಗಳೂರು ಹೆಸರನ್ನೇ ಮೂರುಬಾರಿ ಬದಲಾವಣೆ ಮಾಡಿಲ್ವಾ? ಐಎನ್ಡಿಐಎ ತೆಗೀರಿ ಅಂತ ನಾವ್ಯಾಕೆ ಹೇಳೋನಾ ಅಂತ ಪ್ರಶ್ನಿಸಿದರು.
ನಮ್ಮ ದೇಶಕ್ಕೆ ಮೊದಲಿನಿಂದಲೂ ಇರುವುದು ಭಾರತ ಅಂತ ಬೇಕಾದರೆ ಭಾರತ ಅಂತ ಇಡಲಿ ಬಿಡಿ ಅದರಲ್ಲಿ ತಪ್ಪೇನು. ನಮ್ಮ ಇತಿಹಾಸದಲ್ಲಿ ಬರೀ ಸೋತಿರುವವರ ಬಗ್ಗೆ ತೋರಿಸಿದ್ದಾರೆ ಆದರೆ ಗೆದ್ದಿರುವವರ ಇತಿಹಾಸ ಬರೆಯಲಿ ಬಿಡಿ ಅದರಲ್ಲಿ ತಪ್ಪೇನು ಎಂದು ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದರು.
ಮುಂದಿನ ಸಿಎಂ ಈಶ್ವರ್ ಖಂಡ್ರೆ ಎಂದು ಘೋಷಣೆ ಕೂಗಿದ ಕಾರ್ಯಕರ್ತರು..!ನಿಜವಾಗುತ್ತಾ ಅವರು ಬಯಕೆ?
ಅಮೃತ ಕಳಸ ಯಾತ್ರೆ ಸ್ವಾಗತ ; ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಜಿಲ್ಲೆಯ ಮಣ್ಣು..!