Friday, October 18, 2024

Latest Posts

ಚಿದಂಬರ ದೇವಸ್ಥಾನದ ಚಿದಂಬರ ರಹಸ್ಯ..!

- Advertisement -

ಜನ ಕೆಲವೊಂದು ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಸಿಗದಿದ್ದಲ್ಲಿ ಏನೋ ಚಿದಂಬರ ರಹಸ್ಯವಿದೆ. ಈ ವಿಷಯದ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಬಾಯಿ ಮಾತಿಗೆ ಹೇಳುತ್ತಾರೆ. ಚಿದಂಬರ ರಹಸ್ಯ ಅಂದ್ರೆ ಯಾರಿಗೂ ಸರಿಯಾಗಿ ತಿಳಿದಿರದ ಗುಟ್ಟು ಎಂದರ್ಥ. ಭಾರತದಲ್ಲಿ ಒಂದು ಚಿದಂಬರನ ದೇವಸ್ಥಾನವಿದೆ. ಅಲ್ಲೋಂದು ರಹಸ್ಯವಿದೆ. ಆ ರಹಸ್ಯದ ಬಗ್ಗೆ ಮತ್ತು ಆ ದೇವಸ್ಥಾನದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538

ಚಿದಂಬರ.. ಅಂದರೆ ನಟರಾಜನ ರೂಪದಲ್ಲಿರುವ ಶಿವ. ಚಿತ್ ಮತ್ತು ಅಂಬರ ಸೇರಿದರೆ ಆಗುವ ಪದವೇ ಚಿದಂಬರ. ಚಿತ್ತ ಅಂದರೆ ಅರಿವು ಅಂಬರ ಎಂದರೆ ಆಕಾಶ. ಕೆಲವರ ಪ್ರಕಾರ ಚಿದಬರ ರಹಸ್ಯ ಎಂದರೆ, ಆಕಾಶ ಎಷ್ಟು ದೊಡ್ಡದಿದೆ, ಅದರ ಅಳತೆ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಇದೇ ಚಿದಂಬರ ರಹಸ್ಯ ಎನ್ನಲಾಗಿದೆ. ಅಲ್ಲದೇ, ಅಂಬರದಷ್ಟು ಅರಿವಿರುವ ಶಿವನನ್ನ ಚಿದಂಬರ ಎನ್ನುತ್ತಾರೆ ಅಂತಾನೂ ಹೇಳಲಾಗುತ್ತದೆ.

ತಮಿಳುನಾಡಿನ ಚಿದಂಬರಂ ಎಂಬ ಪಟ್ಟಣದಲ್ಲಿ ಚಿದಂಬರ ದೇವಸ್ಥಾನವಿದೆ. ಈ ಜಾಗದಲ್ಲಿ ಪತಂಜಲಿ ಎಂಬ ಮುನಿಯ ಮುಂದೆ ನಟರಾಜ ಶಿವ ತಾಂಡವ ನೃತ್ಯ ಮಾಡಿದ್ದನೆಂದು ಹೇಳಲಾಗುತ್ತದೆ. ಅಲ್ಲದೇ ಈ ಸ್ಥಳದಲ್ಲಿ ಹಲವಾರು ರಹಸ್ಯಗಳು ಅಡಗಿವೆ ಅಂತಾನೂ ಹೇಳ್ತಾರೆ.

ಸಾಮಾನ್ಯವಾಗಿ ವಿಷ್ಣು ಭಕ್ತರು ಶಿವನ ದೇವಾಲಯಕ್ಕೆ ಹೋಗುವುದಿಲ್ಲ. ಆದ್ರೆ ಈ ದೇವಸ್ಥಾನಕ್ಕೆ ವಿಷ್ಣು ಭಕ್ತರು ಕೂಡ ಆಗಮಿಸುತ್ತಾರೆ. ಏಕೆಂದರೆ, ಇಲ್ಲಿ ವಿಷ್ಣುವಿನ ದೇವಸ್ಥಾನ ಕೂಡ ಇದೆ. ಚಿದಂಬರ ದೇವಸ್ಥಾನದ ಬಗ್ಗೆ ಇನ್ನು ಕೆಲವು ಕಥೆಗಳಿದ್ದು, ಈ ದೇವಸ್ಥಾನವು ಪ್ರಪಂಚದ ಮಧ್ಯ ಭಾಗದಲ್ಲಿದೆ ಎಂದೂ ಕೂಡ ಹೇಳಲಾಗುತ್ತದೆ.

ಇನ್ನೊಂದು ವಿಶೇಷ ಅಂದ್ರೆ, ಇಲ್ಲಿನ ಶಿವ ನಿರಾಕಾರ ಎನ್ನಲಾಗಿದೆ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಯಾವುದೇ ಲಿಂಗವಾಗಲಿ, ಮೂರ್ತಿಯಾಗಲಿ ಇಲ್ಲ. ಇಲ್ಲಿ ಶಿವನನ್ನು ನಿರಾಕಾರವೆಂದು ಪೂಜಿಸಲಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಪರಿಹಾರ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss