ನಮ್ಮ ದೇಶದಲ್ಲಿರುವ ದೇವಸ್ಥಾನಕ್ಕೆ ಹೋಗುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದೊಂದು ದೇವಸ್ಥಾನದಲ್ಲೂ ಒಂದೊಂದು ನಿಯಮವನ್ನು ಅನುಸರಿಸಬೇಕು. ಕೆಲವು ದೇವಸ್ಥಾನಗಳಲ್ಲಿ ಹಿಂದೂಗಳಿಗಷ್ಟೇ ಪ್ರವೇಶವಿರುತ್ತದೆ. ತಿರುಪತಿಯಲ್ಲಿ ಹೆಣ್ಣು ಮಕ್ಕಳು ದುಪಟ್ಟಾ ಇರೋ ಚೂಡಿದಾರ ಅಥವಾ ಸೀರೆ ಉಡಬೇಕು. ಗಂಡು ಮಕ್ಕಳು ಪಂಚೆಯನ್ನೇ ಉಡಬೇಕು ಅಂತಾ ಇದೆ. ಇನ್ನು ಮಂತ್ರಾಲಯದಲ್ಲಿ ಪುರುಷರು ಷರ್ಟ ತೆಗೆದೇ ರಾಯರ ದರ್ಶನ ಮಾಡಬೇಕು. ಹೀಗೆ ಹತ್ತಾರು ನಿಯಮಗಳಿದೆ. ಅದೇ ರೀತಿ ಸಿಖರ ಗುರುದ್ವಾರ ಪ್ರವೇಶ ಮಾಡುವಾಗ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದು ಯಾವ ನಿಯಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸಿಖರು ತಮ್ಮ ಗುರುಗಳಾದ ಗುರುನಾನಕರನ್ನೇ ಪೂಜಿಸುತ್ತಾರೆ. ಗುರುನಾನಕರನ್ನ ಸಿಖರು ವಾಹೆ ಗುರು ಅಂತಾ ಕರೆಯಲಾಗುತ್ತದೆ. ಗುರುದ್ವಾರಕ್ಕೆ ಹೋಗುವಾಗ, ಹೆಣ್ಣು ಮಕ್ಕಳು ಪಂಜಾಬಿ ಚೂಡಿದಾರವನ್ನೇ ಧರಿಸಬೇಕು. ಮತ್ತು ದುಪಟ್ಟಾವನ್ನು ತಲೆಗೆ ಹಾಕಿರಬೇಕು. ಇನ್ನು ಪುರುಷರು ಪಂಜಾಬಿ ಕುರ್ತಾ ಧರಿಸಿ, ತಲೆಗೆ ಪೇಟ ಅಥವಾ ಕೈವಸ್ತ್ರವನ್ನ ಕಟ್ಟಿರಬೇಕು. ಯಾಕಂದ್ರೆ ಗುರುದ್ವಾರದಲ್ಲಿ ಶಾರ್ಟ್ಸ್ ಸ್ಕರ್ಟ್ಸ್ ಹಾಕಿ ಹೋಗಲು ಅನುಮತಿ ಇಲ್ಲ. ಯಾಕಂದ್ರೆ ಇಲ್ಲಿ ಸಿಖ್ ಸಂಸ್ಕೃತಿಗೆ ಮನ್ನಣೆ ನೀಡಲಾಗುತ್ತದೆ.
ಗುರುನಾನಕರ ಪ್ರವೇಶ ಮಾಡುವ ಮೊದಲು ನಿಮದೆ ಜೋಡಾ ಘರ್ ಅನ್ನೋ ಸ್ಥಳ ಸಿಗುತ್ತದೆ. ಅಲ್ಲಿ ನಿಮ್ಮ ಚಪ್ಪಲಿ, ಬ್ಯಾಗ್, ಮುಂತಾದ ವಸ್ತುವನ್ನು ಇಡಬಹುದು. ಇದಾದ ಬಳಿಕ ಕೈ ಕಾಲು ತೊಳೆದು ಗುರುದ್ವಾರಕ್ಕೆ ಹೋಗಿ, ಅಲ್ಲಿ ಗುರುನಾನಕರ ದರ್ಶನ ಮಾಡಿ,ಅಲ್ಲಿ ನಡೆಯುವ ಪಾಠ ಪ್ರವಚನವನ್ನು ಕೇಳಿ, ಪ್ರಸಾದವನ್ನು ಸ್ವೀಕರಿಸಿ ಬರಬೇಕು.
ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಈಗಿನ ಕಾಲದಲ್ಲಿ ಟಿಕ್ಟಾಕ್ ಮಾಡುವುದು, ವೀಡಿಯೋ ಮಾಡುವ ಹುಚ್ಚು ಹಲವರಿಗಿದೆ. ಆದ್ರೆ ಗುರುದ್ವಾರದ ಬಳಿ ಹೀಗೆ ವೀಡಿಯೋ ಮಾಡಲು ಅನುಮತಿ ಇಲ್ಲ. ಹಾಗೇನಾದ್ರೂ ನೀವು ಎಲ್ಲರ ಕಣ್ಣು ತಪ್ಪಿಸಿ, ವೀಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ, ನಿಮಗೆ ಶಿಕ್ಷೆಯಾಗುವುದು ಖಚಿತ. ಫೋಟೋ ತೆಗಿಸಿಕೊಳ್ಳಲು ಮಾತ್ರ ಅನುಮತಿ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




