Friday, June 20, 2025

Latest Posts

ನೈವೇದ್ಯಕ್ಕೆ ತುಳಸಿ ಯಾಕೆ ಹಾಕಬೇಕು..?

- Advertisement -

ಕೃಷ್ಣನಿಗೆ ಪ್ರಿಯವಾದುದ್ದೆಂದರೆ ಬೆಣ್ಣೆ, ಆದರೆ ಅದಕ್ಕೂ ಪ್ರಿಯವಾದುದ್ದೆಂದರೆ ತುಳಸಿ. ದೇವರಿಗೆ ನೇವೇದ್ಯವಿಡುವಾಗ, ಅದಕ್ಕೆ ತುಳಸಿ ದಳ ಹಾಕಿ ನೈವೇದ್ಯ ಮಾಡುವ ಪದ್ಧತಿ ಕೆಲವೆಡೆ ಇದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278

ಕೆಲವೆಡೆ ನೈವೇದ್ಯಕ್ಕೆ ತುಳಸಿ ದಳ ಹಾಕಿ, ಕೃಷ್ಣಾರ್ಪಣ ಮಸ್ತು ಅಂದರಷ್ಟೇ, ನೈವೇದ್ಯ ಮಾಡಿದಂತೆ ಎಂಬ ಪದ್ಧತಿ ಇದೆ. ಯಾಕೆ ಹೀಗೆ ಅಂದ್ರೆ, ನಾವು ನೀಡುವ ನೈವೇದ್ಯ ತುಳಸಿಯ ಮೂಲಕ ದೇವರಿಗೆ ಬೇಗನೇ ಅರ್ಪಿತವಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಆಹಾರಕ್ಕೆ ತುಳಸಿ ಬೀಳುವುದರಿಂದ, ಆಹಾರದಲ್ಲಿನ ಆರೋಗ್ಯವೂ ಇನ್ನು ಇಮ್ಮಡಿಯಾಗುತ್ತದೆ. ಸಾತ್ವಿಕತೆಯ ಪ್ರಭಾವ ಹೆಚ್ಚುತ್ತದೆ.

ಊಟಕ್ಕೆ ಕುಳಿತಾಗ ದೇವರನ್ನ ನೆನೆಯಬೇಕು ಎನ್ನುತ್ತಾರೆ. ಊಟ ಮಾಡುವ ಮುಂಚೆ ಕೃಷ್ಣಾರ್ಪಣ ಮಸ್ತು ಎಂಬು ಭಕ್ತಿಯಿಂದ ಹೇಳಿ, ಊಟ ಶುರು ಮಾಡಿದರೆ, ಊಟದಲ್ಲಿ ಏನೇ ತೊಂದರೆ ಇದ್ದರೂ ಅದು ನಮ್ಮ ದೇಹಕ್ಕೆ ಅಂಟುವುದಿಲ್ಲ. ಅಲ್ಲದೇ, ಶ್ರೀಕೃಷ್ಣನ ಕೃಪೆ ಎಂದಿಗೂ ನಮ್ಮ ಮೇಲಿರುತ್ತದೆ.

ಪುರಾಣದ ಕಥೆಗಳಲ್ಲಿ ತುಳಸಿ ಗೋಪಿಕೆಯಾಗಿದ್ದು, ಶ್ರೀಕೃಷ್ಣನ ಪ್ರೇಮಿಯಾಗಿದ್ದಳಂತೆ. ಆದ್ದರಿಂದಲೇ ತುಳಸಿ ಪೂಜೆಯ ದಿನ ಶ್ರೀಕೃಷ್ಣನ ನೈವೇದ್ಯವೇಂದೇ ಹೇಳಲಾಗುವ ಅವಲಕ್ಕಿಯನ್ನ ಪ್ರಸಾದವಾಗಿ ನೀಡಲಾಗುತ್ತದೆ. ಅಲ್ಲದೇ, ಕೃಷ್ಣನ ತುಲಾಭಾರದ ಸಮಯದಲ್ಲಿ ಚಿನ್ನಾಭರಣಗಳನ್ನಿಟ್ಟರೂ ಸಮತೂಕಕ್ಕೆ ಬರದ ಜೋಕಾಲಿ, ಒಂದು ತುಳಸಿ ದಳವನ್ನಿಟ್ಟ ತಕ್ಷಣ ಸಮಾನವಾಗಿ ನಿಂತಿತು.

ಇನ್ನು ಯಾರ ಮನೆಯಲ್ಲಿ ತುಳಸಿ ಗಿಡ ನೆಟ್ಟು, ಅದಕ್ಕೆ ತಕ್ಕ ನಿಯಮವನ್ನು ಅನುಸರಿಸುತ್ತಾರೋ, ಅವರ ಮನೆ ಸಮೃದ್ಧಿಯುತವಾಗಿರುತ್ತದೆ. ಅಲ್ಲಿ ದೈವಾನುಗ್ರಹವಿರುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ ರವಿವಾರ ಮಾತ್ರ ತುಳಸಿ ಗಿಡ ಮುಟ್ಟುವಂತಿಲ್ಲ, ತುಳಸಿ ಸೇವಿಸುವಂತಿಲ್ಲ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

- Advertisement -

Latest Posts

Don't Miss