ಕಲ್ಯಾಣ ಕರ್ನಾಟಕದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿಯವರು ಸಿಂಧನೂರಿನ ಸಾಲಗುಂದಾ ಗ್ರಾಮದ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಬಳಿಕ ಹಜರತ್ ಸೈಯ್ಯದ್ ಷಾ ಪೀರ್ ವ ಮುರಶೀದ್ ಜಂಗ್ಲಿಪೀರ್ ಖಾದ್ರಿ ವಲಿ ರೆಹಮದುಲ್ಲಾಹ ಅಲೈಹ್ ದರ್ಗಾ ಗೆ ಭೇಟಿ ನೀಡಿ ನಮಿಸಿ ಆಶೀರ್ವಾದ ಪಡೆದರು.
ನಂತರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು, ಹಲವಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸಂತೋಷದಿಂದ ಸೇರ್ಪಡೆ ಮಾಡಿಕೊಂಡರು.
ನಂತರ ದಿದ್ದಿಗಿ ಗ್ರಾಮದ ಅಡವಿ ಸಿದ್ದೇಶ್ವರ ಗುಡಿಗೆ ತೆರಳಿ ದರ್ಶನ ಪಡೆದು, ಗ್ರಾಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಶುಭಾ ಹಾರೈಸಿದರು.
ಪತ್ರದ ಮೂಲಕ ಮನೆ ಮನೆಗೂ ಸಿನಿಮಾ ಆಮಂತ್ರಣ – ಹೊಂದಿಸಿ ಬರೆಯಿರಿ’ ವಿನೂತನ ಪ್ರಚಾರ
ಪತ್ರದ ಮೂಲಕ ಮನೆ ಮನೆಗೂ ಸಿನಿಮಾ ಆಮಂತ್ರಣ – ಹೊಂದಿಸಿ ಬರೆಯಿರಿ’ ವಿನೂತನ ಪ್ರಚಾರ