Banglore news:
ಬೆಂಗಳೂರು,ಆ.20: ಕರ್ನಾಟಕ ರಾಜ್ಯ ಕೃಷಿ,ಉತ್ಪನ್ನಗಳ ಸಂಸ್ಕರಣೆ ಹಾಗು ರಫ್ತು ನಿಗಮ ಬೆಂಗಳೂರಿನಲ್ಲಿ ರೈತ ಉತ್ಪಾದಕರ ಸಂಸ್ಥೆಗಳು ಹಾಗು ರಪ್ತುದಾರರ ಸಮಾವೇಶದ ಉದ್ಘಾಟನೆ ನೆರವೇರಿತು.ಈ ಸಂದರ್ಭದಲ್ಲಿ ಜೀನಿ ಉತ್ಪನ್ನದ ದಿಲೀಪ್ ಕುಮಾರ್ ತಮ್ಮ ಮನದಾಳದ ಮಾತುಗಳನ್ನಾಡಿದರು.
ಜೀನಿ ಸಂಸ್ಥೆ ಒಬ್ಬ ಸಾಮಾನ್ಯ ರೈತನ ಪರಿಶ್ರಮದ ಫಲ. ಇಲ್ಲಿ ಯಾವುದೇ ದಲ್ಲಾಲಿಕೋರರಿಲ್ಲ ಬದಲಾಗಿ ನಾವು ಕಚ್ಚಾವಸ್ತುಗಳನ್ನು ನೇರವಾಗಿ ರೈತರಿಂದಲೇ ಪಡೆದುಕೊಳ್ಳುತ್ತೇವೆ ಹಾಗೆಯೇ ಯಾವುದೇ ಕಲಬೆರಕೆ ಇಲ್ಲಿಲ್ಲ. ನಮ್ಮ ಜೀನಿ ಉತ್ಪನ್ನದಲ್ಲಿ ಇವತ್ತು 600 ಕ್ಕೂ ಅಧಿಕ ಎಂಪ್ಲೋಯಿಸ್ ಇದ್ದಾರೆ. ಜೀನಿ ಉತ್ಪನ್ನ ಇಷ್ಟರ ಮಟ್ಟಿಗೆ ಬೆಳೆಯಲು ನನಗೆ ಸಹಾಯಕವಾದುದು ಫೇಸ್ ಬುಕ್.ಎಲ್ಲಾ ರೈತರೂ ಈ ರೀತಿಯಾಗಿ ಸಾಮಾಜಿಕ ಜಾಲತಾಣವನ್ನು ತಮ್ಮ ಉತ್ಪಾದನೆಯನ್ನು ದಲ್ಲಾಳಿಕೋರರಿಲ್ಲದೆ ಮಾರಾಟ ಮಾಡಿ ರೈತನೂ ಬೆಳೆಯಬಹುದು ಎಂದರು.
ಜೊತೆಗೆ ಬಿಸಿ ಪಾಟೀಲ್ ರವರು ತಮ್ಮ ಜೀನಿ ಉತ್ಪಾದನೆಯ ಬಗ್ಗೆ ಮಾತನಾಡಿದ್ದು ನನಗೆ ಹೆಮ್ಮೆ ತಂದಿದೆ. ಸಾಮಾನ್ಯ ರೈತನ ಶ್ರಮವನ್ನು ಇಷ್ಟರ ಮಟ್ಟಿಗೆ ಪ್ರೋತ್ಸಾಹಿಸಿದ್ದು ನನಗೆ ಸಂತಸ ತಂದಿದೆ. ನಿಮ್ಮಂತ ಕೃಷಿ ಮಂತ್ರಿ ಇರೋವರೆಗು ನಮಗೆ ಭಯ ಇಲ್ಲ ಎಂದರು.
ರೈತ,ದಲ್ಲಾಳಿಗಳಿಗೆ ಗುಲಾಮರಾಗಬಾರದು: ರೈತ ಸ್ವಾವಲಂಬನೆಗೆ ‘ಜೀನಿ’ ಉತ್ತಮ ಉದಾಹರಣೆ : ಬಿ.ಸಿ.ಪಾಟೀಲ್
ಮಾಜಿ ಸಿಎಂ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟ ಎಸೆದ ಕೇಸ್ ಗೆ ಬಿಗ್ ಟ್ವಿಸ್ಟ್: ಮೊಟ್ಟೆ ಎಸೆದಿದ್ದು ಯಾರು ಗೊತ್ತಾ.?