ಕೊಪ್ಪಳ:ನಗದಲ್ಲಿ ಜಿಂಕೆ ಪಾರ್ಕ್ ಮಾಡಲು ರೈತ ಸಂಘದಿಂದ 2005 ರಿಂದ ಹೋರಾಟ ಮಾಡುತ್ತಾ ಬಂದರು ಕೂಡ ಮುಖ್ಯಮಂತ್ರಿಗಳು ಜನಪ್ರತಿನಿಧಿಗಳು ಯಾರು ಜಿಂಕೆ ಪಾರ್ಕ್ ನಿರ್ಮಾಣ ಮಾಡಲು ಮುಂದೆಬರಲಿಲ್ಲ ಈಗಲಾದರೂ ಕಾಲಮಿಂಚಿಲ್ಲ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಿ ಜಿಂಕೆ ಪಾರ್ಕ್ ನಿರ್ಮಿಸಿ ಕೊಡಬೇಕೆಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.
ಹೌದು ಉತ್ತರ ಕರ್ನಾಟಕದ ಕೊಪ್ಪಳ. ರಾಯಚೂರು. ಗದಗ. ಬಳ್ಳಾರಿ. ಹಾವೇರಿ. ಧಾರವಾಡ. ಬಾಗಲಕೋಟೆ. ಬೀದರ್. ಎಂಟು ಜಿಲ್ಲೆಗಳ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಇದ್ದೀರಿ ವಿಧಾನಸಭಾ ಅಧಿವೇಶನಲ್ಲಿ ಒಬ್ಬರಾದರೂ ಜಿಂಕೆ ಸಲುವಾಗಿ ಚರ್ಚಿಸಿರಿ ಜಿಂಕೆ ಪಾರ್ಕ್ ಮಾಡಲು ನಿರ್ಧಾರ ತೆಗೆದುಕೊಳ್ಳಬೇಕೆಂದು ರೈತ ಮುಖಂಡ ಮಾಂತೇಶ ಕೋಳೂರ ಇವರು ಆಗ್ರಹಿಸಿದರು
ಇಲ್ಲವಾದರೆ ಎಂಟು ಜಿಲ್ಲೆಗಳ ರೈತರು ಜಿಂಕೆ ಕಾಟಕ್ಕೆ ಹಗಲು ರಾತ್ರಿ ನಿದ್ದೆಗೆಟ್ಟು ಬೇಸತ್ತು ರೈತಾಪಿ ಜನರು ಇದ್ದ ಬಿದ್ದ ಬೆಳೆಗಳನ್ನು ಉಳಿಸಿಕೊಳ್ಳಲು ಶಾಲೆ ಮಕ್ಕಳನ್ನು ಸಹ ಜಿಂಕೆ ಕಾಯಲು ಹೊಲಕ್ಕೆ ಕಳಿಸುತ್ತಾರೆ.
ಹೌದು ಸುಮಾರು18 ವರ್ಷ ಕಳೆದರೂ ಕೂಡ ಸರ್ಕಾರ ಜಿಂಕೆ ಪಾರ್ಕ್ ನಿರ್ಮಾಣಕ್ಕೆ ಮುಂದೆ ಬರಲಿಲ್ಲ ಈ ಹಿಂದೆ ಜಿಂಕೆ ಸಲುವಾಗಿ ಚುಣಾವಣೆಯಲ್ಲಿ ರೈತರು ತಟ್ಟಸ್ಥ ಮತಧಾನ ಮಾಡಿದ್ದು ಕೇಂದ್ರ ಸರ್ಕಾರದ ಗಮನಕ್ಕೆ ಹೊದ ಮೇಲೆ ಸುಪ್ರೀಂ ಕೋರ್ಟಿನಲ್ಲಿ ನೊಟ ಬಟನನ್ನು ಅಂತ ಗುರ್ತಿಸಿದರು.ಏನೇ ಮಾಡಿದರು ಸರ್ಕಾರ ಜಿಂಕೆ ಕಾಟ ತಪ್ಪಿಸಲಿಲ್ಲ ಎಂದರು
2010ರಲ್ಲಿ ಗದಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೂಲಕ ಜಿಂಕೆ ಬುಕ್ಕು ಬಿಡುಗಡೆ ಮಾಡಿದ್ದು ಅಲ್ಲದೇ
ನಂತರ 2016.ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬಸವರಾಜ ರಾಯರಡ್ಡಿ ಹಾಗೂ ಅರಣ್ಯ ಸಚಿವರಿಗೆ.
2016. ಜುಲೈ 15ರಿಂದ.ಆಗಸ್ಟ್ 15.ರವರಿಗೆ ಒಂದು ತಿಂಗಳಕಾಲ ಜಿಂಕೆ ಪಾರ್ಕ್ ಮಾಡಲು ಪತ್ರ ಚಳುವಳಿ ಮಾಡಿದ್ದು ಅಲ್ಲದೇ ಮೂವರಿಗೂ ಎಸ್ಎಂಎಸ್ ಚಳವಳಿ ಮಾಡಿದೇವೆ
2017ರಲ್ಲಿ. ಜಿಂಕೆ ಕಾಟ ರೈತರ ಪರದಾಟ ಎಂಬ 21.ನಿಮಿಷದ ಸಾಕ್ಷಿ ಚಿತ್ರದ ಸಿಡಿ ಬಿಡುಗಡೆ ಮಾಡಿ ವಿಧಾನ ಸೌಧದಲ್ಲಿ ಜನಪ್ರತಿನಿಧಿಗಳ ಗಮನ ಸೇಳೆದರೂ ಕೂಡ ಸರ್ಕಾರ ಜಿಂಕೆ ಪಾರ್ಕ್ ನಿರ್ಮಾಣ ಮಾಡಿ ಕೊಡಲಿಲ್ಲ ಎಂದು ರೈತ ಸಂಘದ ಜಿಲ್ಲಾಅಧ್ಯಕ್ಷ ಬಸವರಾಜ ಹೂಗಾರ ಇವರ ಆಗ್ರಹಿಸಿದರು.
ಅಂದಪ್ಪ ಕೋಳೂರ