Sunday, September 8, 2024

Latest Posts

Jain muni-ಜೈನ ಸಮುದಾಯದವರಿಂದ ಮೌನ ಪ್ರತಿಭಟನೆ

- Advertisement -

ಹುಬ್ಬಳ್ಳಿ:ಕಳೆದ 4 ದಿನಗಳ ಹಿಂದೆ  ಚಿಕ್ಕೋಡಿಯ ಕಾಮಕುಮಾರ ನಂದಿ ಮಹಾರಾಜರು ಹತ್ಯೆ ನಡೆದಿರುವ ಕಾರಣ ಧಾರವಾಡ ಜಿಲ್ಲೆಯ ಕಲಘಟಗಿ ಜೈನ ಸಮಾಜದ ಸದಸ್ಯರಿಂದ  ಮೌನ ಪ್ರತಿಭಟನೆ ಮೆರವಣಿಗೆ  ಹಮ್ಮಿಕೊಂಡಿದ್ದರು.

ಕಲಘಟಗಿ ಜೈನ ಸಮುದಾಯದ ಸದಸ್ಯರು ನಗರದ ಮಿನಿ ವಿಧಾನಸೌಧದವರೆಗೆ ಮೌನ ಪ್ರತಿಭಟನೆ ಮಾಡಿ ಕಲಘಟಗಿ ತಹಶಿಲ್ದಾರರ ಕಛೇರಿಗೆ ತೆರಳಿ ಜೈನ ಮುನಿಗಳಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕಲಘಟಗಿ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈಗಾಗಲೆ ಸಾಕಷ್ಟು ಕಡೆ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಕೈಗೊಳ್ಳುತಿದ್ದಾರೆ. ವಿಪಕ್ಷ ನಾಯಕರು ಸಹ ಜೈನ ಮುನಿಗಳ ಹತ್ಯೆ ಕುರಿತು ಪ್ರತಿಭಟನೆ ಮಾಡಿತಿದ್ದಾರೆ. ಪೋಲಿಸರು ಕೊಲೆ ಮಾಡಿದವರನ್ನು ಬಂದಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Police-ಯುವಕನನ್ನು ಬೆತ್ತಲೆ ಮಾಡಿದ ರೌಡಿಶೀಟರಗಳು

GruhaLaxmi-ಕಾಂಗ್ರೆಸ್ ಗ್ಯಾರಂಟಿ ಅರ್ಜಿ ನಕಲಿ ಮಾಡಿ ಮಾರಾಟ

Tiger Step: ಹುಲಿಹೆಜ್ಜೆ..! ಗ್ರಾಮಸ್ಥರು ಆಂತಕದಲ್ಲಿ ..!

 

 

- Advertisement -

Latest Posts

Don't Miss