Thursday, October 17, 2024

Latest Posts

Kannada Bigg Boss Season 11: ಇಬ್ಬರು ಬಿಗ್‌ಬಾಸ್ ಸ್ಪರ್ಧಿಗಳಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

- Advertisement -

Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿದ್ದು, ಸ್ವರ್ಗ ನರಕ ಎನ್ನುವ ಕಾನ್ಸೆಪ್ಟ್ ಶುರುವಾಗಿದೆ.

ನರಕದಲ್ಲಿ ಇರುವವರು ಟಾಸ್ಕ್‌ನಲ್ಲಿ ಗೆದ್ದು ಪಾಾಯಿಂಟ್ಸ್ ಪಡೆದರೆ, ಅವರಿಗೆ ಸ್ವರ್ಗಕ್ಕೆ ಬರಲು ಅವಕಾಶವಿದೆ. ಅದೇ ರೀತಿ ಟಾಸ್ಕ್‌ನಲ್ಲಿ ಸೋತರೆ, ಸ್ವರ್ಗವಾಸಿಗಳು ನರಕಕ್ಕೆ ಹೋಗಬೇಕು. ಈ ರೀತಿ ಟಾಸ್ಕ್‌ನಲ್ಲಿ ಗೆಲ್ಲಲೇಬೇಕೆಂದು ಸ್ಪರ್ಧಿಸಿ, ಬಿಗ್‌ಬಾಸ್‌ನ ಇಬ್ಬರು ಸ್ಪರ್ಧಿಗಳು, ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

ಟಾಸ್ಕ್‌ ಆಡುವಾಗ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಮ್ ಬಿದ್ದಿದ್ದು, ತೀವ್ರ ಪೆಟ್ಟಾಗಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅದೇ ರೀತಿ ಗೋಲ್ಡ್ ಸುರೇಶ್ ಅವರಿಗೂ ಪೆಟ್ಟಾಗಿದ್ದು, ಅವರಿಗೂ ಚಿಕಿತ್ಸೆ ಕೊಡಿಸಿ, ಕರೆತರಲಾಗಿದೆ.

ಕಳೆದ ಬಿಗ್‌ಬಾಸ್‌ನಲ್ಲಿ ಟಾಸ್ಕ್ ಆಡುವಾಗ ಸೋಪ್ ನೀರು ಕಣ್ಣಿಗೆ ಬಿದ್ದ ಕಾರಣ, ಸಂಗೀತಾ ಶೃಂಗೇರಿ ಮತ್ತು ಪ್ರತಾಪ್ ಕಣ್ಣಿಗೆ ಪೆಟ್ಟಾಗಿ, ಒಂದೆರಡು ದಿನ, ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದು ಬಂದಿದ್ದರು. ಆದರೂ ಅವರಿಗೆ ಮತ್ತೆ ಸ್ವಲ್ಪ ದಿನ ಕಪ್ಪು ಕನ್ನಡಕ ಬಳಸುವಂತೆ ವೈದ್ಯರು ಸೂಚಿಸಿದ್ದರು.

ಅಲ್ಲದೇ, ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಶೋ ಮಧ್ಯವೇ ಬಂಧಿಸಲಾಗಿತ್ತು. ವಡ್ಡ ಎಂದು ಬಾಯಿ ತಪ್ಪಿ ಬೈದ ಕಾರಣಕ್ಕೆ, ತನಿಷಾ ವಿರುದ್ಧ ಪ್ರಕರಣ ದಾಖಲಾಗಿತ್ತು.

- Advertisement -

Latest Posts

Don't Miss