Kanthavara : ಉಚಿತ ಆಯುಷ್ ಚಿಕಿತ್ಸಾ ಶಿಬಿರ

Karkala News: ಕಾರ್ಕಳ : ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಕಛೇರಿ ಉಡುಪಿ, ಗ್ರಾಮ ಪಂಚಾಯತ್ ಕಾಂತಾವರ, ಸ.ಆ.ಚಿ.ಕಾಂತಾವರ, ಇದರ ಸಂಯುಕ್ತ ಆಶ್ರಯದಲ್ಲಿ ಎನ್‍ಎಎಮ್ ಯೋಜನೆಯಡಿಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಬುಧವಾರ ಕಾಂತಾವರ ಕನ್ನಡ ಭವನದಲ್ಲಿ ನಡೆಯಿತು.

ಶಿಬಿರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ನಾಯ್ಕ್ ಉದ್ಘಾಟಿಸಿದರು. ಶುಭ ಹಾರೈಸಿದರು. ಗ್ರಾ.ಪಂ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸದಾಶಿವ ಮೂಲ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ದಾಸ್ ಅಡ್ಯಂತಾಯ, ಅಮಿತಾ ಪೂಜಾರಿ, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆಯ ವೈದ್ಯಾಧಿಕಾರಿ ಡಾ. ಶ್ರೇಯಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವನಿತಾ ನಾಯ್ಕ್ ಆಯುರ್ವೇದದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿ ಆಯುರ್ವೇದವನ್ನು ದಿನನಿತ್ಯ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಆರೋಗ್ಯದ ಜೊತೆಗೆ ಶಾಂತಿ, ನೆಮ್ಮದಿ ಪಡೆದುಕೊಳ್ಳಬಹುದೆಂದು ಎಂದರು.

Chandrayana-3 : ಇದು ಭಾರತಕ್ಕೆ ಹೆಮ್ಮೆಯ ಕ್ಷಣ : ಸಿಎಂ ಸಿದ್ದರಾಮಯ್ಯ

Leopard : ಆಹಾರ ಅರಸಿ ಬಂದ ಚಿರತೆ ಕೊಟ್ಟಿಗೆಯಲ್ಲಿ ಬಂಧಿ..?!

Shravana belagola-ಜೋಳದ ಮೂಟೆ ಹೊತ್ತು ಬೆಟ್ಟ ಹತ್ತಿದೆ ಸಾಹಸಿ..! ಎಷ್ಟು ಕೆಜಿ ಭಾರ ಗೊತ್ತಾ?

 

About The Author