Tuesday, June 17, 2025

Latest Posts

‘ಕರ್ಣ’ನಿಗೆ ಆರಂಭಿಕ ವಿಘ್ನ : ಕಲಿಗಾಲದಲ್ಲೂ ತಪ್ಲಿಲ್ಲ ಸಂಕಷ್ಟ! ; ಬಹು ನಿರೀಕ್ಷಿತ ಧಾರಾವಾಹಿ ದಿಢೀರ್ ಸ್ಥಗಿತವಾಗಿದ್ದೇಕೆ..?

- Advertisement -

ಬೆಂಗಳೂರು : ದೊಡ್ದ ದೊಡ್ಡ ಸ್ಟಾರ್​ ಗಳ ದಂಡೇ ಇರಲಿ.. ಬಿಲಿಯನ್, ಟ್ರಿಲಿಯನ್ ಗಟ್ಟಲೇ ಬಂಡವಾಳ ಹಾಕಿರಲಿ. ಸಿನಿಮಾಗಳು ಕೇವಲ 3 ಗಂಟೆಯಲ್ಲಿ ಮುಗಿದು ಹೋಗುತ್ತೆ. ಥಿಯೇಟರ ಗಳಲ್ಲಿ ಕೆಲ ಗಂಟೆ ಕುಳಿತು ನೋಡಿ ಜನ್ರು ವಾಪಸ್ ಆಗ್ತಾರೆ. ಆದ್ರೆ ಧಾರಾವಾಹಿಗಳ ಕಥೆ ಆಗಲ್ಲ.. ಹೆಸರಿಗೆ ತಕ್ಕಂತೆ ದಾರದ ರೀತಿ ವರ್ಷಾನುಗಟ್ಟಲೇ ವಾಹಿನಿಗಳು ಪ್ರಸಾರ ಮಾಡುತ್ತಲೇ ಇರುತ್ತವೆ.

ಗೃಹಿಣಿಯರಂತು ಒಮ್ಮೆ ಟಿವಿ ಮುಂದೆ ಸೀರಿಯಲ್ ನೋಡೋಕೆ ಕುಳಿತರೇ ಕಥೆ ಮುಗಿದೇ ಹೋಯ್ತು. ಹೊತ್ತುಗೊತ್ತು ಏನೂ ನೋಡಲ್ಲ. ಲೀಟರ್ ಗಟ್ಟಲೇ ಕಣ್ಣೀರು ಸುರಿಸುತ್ತಾ, ಪಾತ್ರಧಾರಿಗಳ ಭಾವನೆಗೆ ತಕ್ಕಂತೆ ತಮ್ಮ ಮೂಡ್​ಗಗಳನ್ನು ಚೇಂಜ್ ಮಾಡಿಕೊಂಡು ಕುಳಿತೇ ಇರ್ತಾರೆ. ಇತ್ತೀಚಿನ ದಿನಗಳಲ್ಲಿ ಗಂಡ್ಮಕ್ಕಳನ್ನೂ ಕೂಡ ತನ್ನತ್ತ ಸೆಳೆಯುತ್ತಿವೆ ಧಾರವಾಹಿಗಳು.

ಯಾವುದಾದರೊಂದು ಹೊಸ ಧಾರವಾಹಿ ಶುರುವಾಗ್ತಿದೆ ಅಂದ್ರೆ ಸಾಕು. ತಮ್ಮ ಅಚ್ಚುಮೆಚ್ಚಿನ ನಟ ನಟಿಯರು ಇದ್ರೆ ಸಾಕು, ಪ್ರೋಮೋ ನೋಡಿ ಥ್ರಿಲ್ ಆಗೋ ಮಂದಿ, ಯಾವಾಗಿಂದ ಶುರುವಾಗುತ್ತೆ ಅಂತಾ ಜಾತಕ ಪಕ್ಷಿಯಂತೆ ಕಾದು ಕುಳಿತಿರ್ತಾರೆ. ಊಟ ಮಾಡ್ತಾರೋ ಇಲ್ವೋ.. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ಅರೆಕ್ಷಣವೂ ಮಿಸ್ ಮಾಡಿಕೊಳ್ಳೋದೆ ಇಲ್ಲ. ಅರ್ಧಗಂಟೆ ಮುಂಚಿತವಾಗೇ ಚಾನಲ್ ಹಾಕಿಕೊಂಡು ಕಾಯುತ್ತಿರುತ್ತಾರೆ.

ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲಿ ಕರ್ಣ ಅನ್ನೋ ಹೊಸ ಸೀರಿಯಲ್ನ ಪ್ರೋಮೋ ಭಾರೀ ಸದ್ದು ಮಾಡ್ತಿತ್ತು. ಮುಖ್ಯ ಭೂಮಿಕೆಯಲ್ಲಿ ಕನ್ನಡತಿ ಖ್ಯಾತಿಯ ಕಿರಣ್ ರಾಜ್ ವೈದ್ಯನ ಪಾತ್ರದಲ್ಲಿ ಮತ್ತು ಬಿಗ್ ಬಾಸ್ನ ಭವ್ಯ ಗೌಡ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾಗಿಣಿ ಖ್ಯಾತಿಯ ನಮ್ರತಾ ಗೌಡ ಕೂಡ 2ನೇ ಹೀರೋಯಿನ್ ಆಗಿ ಎಂಟ್ರಿ ಕೊಡುತ್ತಿರುವುದು ಪಕ್ಕಾ ಆಗಿದೆ. ತ್ರಿಕೋನ ಪ್ರೇಮ ಕಥೆ ಹೊಂದಿರುವ ಕರ್ಣ ಸೀರಿಯಲ್, ಭಾರೀ ಕುತೂಹಲ ಮೂಡಿಸಿತ್ತು.

‘ಕರ್ಣ’ನಿಗೆ ಆರಂಭಿಕ ಆಘಾತ!

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಜೂನ್ 16ರಿಂದಲೇ ಕರ್ಣ ಧಾರಾವಾಹಿ ರಾತ್ರಿ 8 ಗಂಟೆಗೆ ಪ್ರಸಾರವಾಗಬೇಕಿತ್ತು. ಆದರೆ ಕನ್ನಡಿಗರ ಮನೆ- ಮನಗಳನ್ನು ತುಂಬಬೇಕಿದ್ದ ಕರ್ಣನಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕರ್ಣ ಧಾರಾವಾಹಿ ಪ್ರಸಾರವನ್ನು ದಿಢೀರ್ ಮುಂದೂಡಲಾಗಿದೆ. ಕಾರಣ ಕನ್ನಡದ ಮತ್ತೊಂದು ಪ್ರಖ್ಯಾತ ಸುದ್ದಿವಾಹಿನಿ.

ಬಿಗ್​ ಬಾಸ್​​ಗೆ ಹೋಗುವಾಗ ಕನ್ನಡ ಪ್ರಮುಖ ಸುದ್ದಿವಾಹಿನಿ ಜೊತೆ ಭವ್ಯ ಗೌಡ ಒಪ್ಪಂದ ಮಾಡಿಕೊಂಡಿದ್ರಂತೆ. ಅಗ್ರಿಮೆಂಟ್ ಪ್ರಕಾರ ಬಿಗ್ ಬಾಸ್ ಬಳಿಕ ಅದೇ ಚಾಲನ್​ನ ಸೀರಿಯಲ್​ ನಲ್ಲಿ ಭವ್ಯ ಗೌಡ ನಟಿಸಬೇಕಿತ್ತು. ಆದರೆ ಝೀ ಕನ್ನಡ ವಾಹಿನಿಯ ಧಾರಾವಾಹಿಯ ಕರ್ಣ ಧಾರಾವಾಹಿಯಲ್ಲಿ ಭವ್ಯ ಗೌಡ ಬ್ಯುಸಿಯಾಗಿದ್ರು. ಹೀಗಾಗಿ ಆ ವಾಹಿನಿ ಕೋರ್ಟ್ ಮೆಟ್ಟಿಲೇರಿದ್ದು, ಕರ್ಣ ಸೀರಿಯಲ್ ಪ್ರಸಾರ ಮಾಡದಂತೆ ಸ್ಟೇ ತಂದಿದ್ದಾರೆ. ಹೀಗಾಗಿ ಕರ್ಣ ಧಾರವಾಹಿ ಪ್ರಸಾರವನ್ನು ಕಡೆ ಗಳಿಗೆಯಲ್ಲಿ ಮುಂದೂಡಲಾಗಿದೆ.

ಬಂದೇ ಬರ್ತೀನಿ.. ಕರ್ಣ ವಾಗ್ದಾನ..!

ಕರ್ಣ ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ ಎಲ್ಲಾ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು’ ಎಂದು ವಾಹಿನಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ. ‘ನಿಷ್ಠೆ, ನಿಯತ್ತು, ತ್ಯಾಗ, ಧೈರ್ಯಕ್ಕೆ ಇನ್ನೊಂದು ಹೆಸರು ಅವನು. ಯುಗ ಯುಗಗಳೇ ಕಳೆದರೂ ದಾನಶೂರನಾಗಿ ಎಲ್ಲರ ಮನದಲ್ಲಿ ನೆಲೆಯಾದವನು. ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು, ಆದ್ರೆ ಬರೋದನ್ನ ತಡೆಯೋದಕ್ಕೆ ಸಾಧ್ಯವೇ ಇಲ್ಲ. ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ.. ಶೀಘ್ರದಲ್ಲೇ, ಅದೇ ಪ್ರೀತಿ, ವಿಶ್ವಾಸದಿಂದ ಕರ್ಣ ನನ್ನ ಬರಮಾಡಿಕೊಳ್ತೀರಿ ಅಲ್ವಾ’ ಇನ್ ಸ್ಟಾಗ್ರಾಮ್​​ನಲ್ಲಿ ಕಿರಣ್ ರಾಜ್ ಪೋಸ್ಟ್ ಹಾಕಿದ್ದಾರೆ.

ಇನ್ನೂ ನಮ್ರತಾ ನಿತ್ಯಾ ಎಂಬ ಪಾತ್ರದಲ್ಲಿದ್ದರೆ, ಭವ್ಯಾ ಪಾತ್ರದ ಹೆಸರು ನಿಧಿ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡುವ ಮಾಡುತ್ತಿರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್​ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಕೋರ್ಟ್ ಸ್ಟೇ ಇರೋದ್ರಿಂದ ಕರ್ಣ ಧಾರಾವಾಹಿಯ ಪ್ರೋಮೋಗಳನ್ನೂ ಸಹ ಡಿಲೀಟ್ ಮಾಡಲಾಗಿದೆ. ಭವ್ಯಾ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಕರ್ಣನಿಗೆ ಸಂಬಂಧಿಸಿದ ಫೋಸ್ಟ್ ಗಳನ್ನು ತೆಗೆದು ಹಾಕಿದ್ದಾರೆ.

ಕರ್ಣ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಅಪಾರ ನಷ್ಟವಾಗಿದೆ. ಸದ್ಯ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಕರ್ಣ ಸೀರಿಯಲ್‌ ಪ್ರಸಾರ ಮಾಡಲು ಆಗುವುದಿಲ್ಲ. ಝೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲೂ ಭವ್ಯಾ ಗೌಡ ಇದ್ದ ಕರ್ಣ ಸೀರಿಯಲ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನ ಡಿಲೀಟ್ ಮಾಡಲಾಗಿದೆ.

- Advertisement -

Latest Posts

Don't Miss