Saturday, June 21, 2025

Latest Posts

ಕಾಸರಗೋಡು: ಬೈಕ್ ಲಾರಿ ನಡುವೆ ಬೀಕರ ಅಪಘಾತ, ಮಹಿಳೆ ಸಾವು

- Advertisement -

Kasaragod News:

ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟು, ಲಾರಿಯಡಿಗೆ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಆದೂರು ಬಳಿ ನಡೆದಿದೆ. ಆದೂರು ಪಾಂಡಿ ಅಂಬಟೆ ಮೂಲೆಯ ಎ.ಕೆ. ಮುಹಮ್ಮದ್ ಅವರ ಪತ್ನಿ ಅಮೀನಾ (೪೫) ಮೃತಪಟ್ಟವರು ಎಂದು ತಿಳಿದು ಬಂದಿದೆ. ಪತಿ ಹಾಗೂ ಮಗುವಿನ ಜೊತೆ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂಬದಿಯಲ್ಲಿದ್ದ ಅಮೀನಾ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಲಾರಿಯಡಿಗೆ ಸಿಲುಕಿ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಪತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಉಪಮೇಯರ್ ಆಯ್ಕೆ

ಬೆಂಗಳೂರಿಗೆ ಬ್ರಿಟನ್ ರಾಣಿ ಬಂದಿದ್ದೇಕೆ ಗೊತ್ತಾ..?!

ರಸ್ತೆಯಲ್ಲಿ ನಡೆದಾಡುತ್ತಿದ್ದ ವೃದ್ಧನ ಮೇಲೆ ಎಗರಿದ ಚಿರತೆ…!

- Advertisement -

Latest Posts

Don't Miss