ಕಾಸರಗೋಡು: ಕಾಡು ಹಂದಿ ಬೇಟೆಯಾಡಿದ ನಾಲ್ವರ ಬಂಧನ

Kasaragod News:

ಕಾಸರಗೋಡಿನಲ್ಲಿ  ಕಾಡು ಹಂದಿ ಭೇಟೆಯಾಡಿದವರು ಪೊಲೀಸರ ಅತಿಥಿಯಾಗಿದ್ಧಾರೆ.ಕಾಡು ಹಂದಿ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಅರಣ್ಯ ಇಲಾಖೆ ಸಿಬಂದಿ ಬಂಧಿಸಿದ್ದಾರೆ

ರಾಜಪುರದ ತಂಬಾನ್ (58) , ಮಹೇಶ್ (45) , ಮಿಥುನ್ (26) ಹಾಗೂ ವಿಪಿನ್ ( 28) ಬಂಧಿತರು. ರಾಜಪುರ ಅಯೋಟ್ ಎಂಬಲ್ಲಿ ಕಾಡು ಹಂದಿಯನ್ನು ಮಾಂಸ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ.

ಕಾಸರಗೋಡು ಕುಂಬಳೆಯ ಸಮೀಪದ ಉಪ್ಪಳ ಪರಿಸರದಿಂದ ಹಂದಿಯನ್ನು ಭೇಟೆಯಾಡಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಸೋನು ಗೌಡ ನೀಡಿದ್ರು ಲವ್ ಟಿಪ್ಸ್ …!

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದ ಹೈಕೋರ್ಟ್

ಕಾರು 25 ಅಡಿ ಆಳಕ್ಕೆ ಬಿದ್ದರೂ ಪ್ರಯಾಣಿಕರು ಸೇಫ್…!

About The Author