Sunday, June 1, 2025

Latest Posts

ಜೆಡಿಎಸ್ ನಲ್ಲಿ ಮುಂದುವರಿಯುವುದರ ಬಗ್ಗೆ ಕ್ಷೇತ್ರದ ಮುಖಂಡರು ಹಾಗೂ ಅಭಿಮಾನಿಗಳು ನಿರ್ಧರಿಸುತ್ತಾರೆ : ಕೆ.ಎಂ ಶಿವಲಿಂಗೇಗೌಡ

- Advertisement -

ಹಾಸನ: ನನಗೂ ಹಾಗೂ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ ಆದರೆ ಪಕ್ಷದಲ್ಲಿ ಮುಂದುವರಿಯುವುದು ಅಥವಾ ಬಿಡುವುದನ್ನ ಕ್ಷೇತ್ರದ ನಮ್ಮ ಮುಖಂಡರು ಹಾಗೂ ಅಭಿಮಾನಿಗಳು ನಿರ್ಧರಿಸುತ್ತಾರೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ತಮ್ಮ ರಾಜಕೀಯ ಮುನ್ನಡೆಯ ನಿಗೂಢತೆಯನ್ನ ಕಾದುಕೊಂಡಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡರು ಸ್ಥಳೀಯ ರಾಜಕೀಯ ಚಿತ್ರಣ ಸೇರಿದಂತೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖಂಡರಾದ ಎಚ್.ಡಿ. ರೇವಣ್ಣ ಅವರೊಂದಿಗೆ ಚರ್ಚಿಸಿದ್ದರು ಸಹ ಕ್ಷೇತ್ರದಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವುದು ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳಸಾ ಬಂಡೂರಿ ಯೋಜನೆಗೆ 8 ವರ್ಷಗಳಿಂದ ಬಿಜೆಪಿ ಸರ್ಕಾರ ತಡೆ ಹಿಡಿದಿದೆ : ರಣದೀಪ್ ಸುರ್ಜೇವಾಲ

ಈಗಾಗಲೇ ಒಬ್ಬರು ನಾನೇ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಇವರನ್ನ ಪಕ್ಷಕ್ಕೆ ಹೆಸರಿಸಿಕೊಂಡಾಗಲು ನಮ್ಮ ಮುಖಂಡರು ನನ್ನ ಗಮನಕ್ಕೆ ತರಲಿಲ್ಲ ಇದು ವೈಯಕ್ತಿಕವಾಗಿ ನನ್ನನ್ನು ಮತ್ತಷ್ಟು ಗಾಸಿಗೊಳಿಸಿದ ವಿಷಯವಾಗಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡರು. ಕುಮಾರಸ್ವಾಮಿಯವರು ಹಾಗೂ ರೇವಣ್ಣ ಅವರ ನಡೆ-ನುಡಿಯನ್ನು ಅವಲೋಕಿಸುತ್ತಾ ಬಂದಿದ್ದು ಆದರೂ ಧನುರ್ಮಾಸ ಮುಗಿಯುವವರೆಗೂ ರಾಜಕೀಯವಾಗಿ ಯಾವ ನಿರ್ಧಾರವನ್ನು ನಾನು ತೆಗೆದುಕೊಳ್ಳುವುದಿಲ್ಲ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕೀಯವಾಗಿ ಬಲ ನೀಡಿರುವ ನಮ್ಮ ಮುಖಂಡರು ಹಾಗೂ ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ : ಸಿಎಂ ಬೊಮ್ಮಾಯಿ

ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

- Advertisement -

Latest Posts

Don't Miss