ಕರ್ನಾಟಕ ಟಿವಿ ಕೋಲಾರ :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲಾಕ್ ಡೌನ್ ಹಿನ್ನೆಲೆ ಪ್ರತಿ ದಿನ ರಾಜ್ಯವ್ಯಾಪಿ ರೈತರ ಸಮಸ್ಯೆ ಆಲಿಸಲು ಸಂಚಾರ ಮಾಡ್ತಿದ್ದಾರೆ. ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಆಗ್ತಿರುವ ನಷ್ಟದ ಬಗ್ಗೆ ಮಾಹಿತಿಯನ್ನ ಪಡೆದ್ರು.. ಸರ್ಕಾರ ಈ ಕೂಡಲೇ ರೈತರ ನೆರವಿಗೆ ಧಾವಿಸುವಂತೆ ಒತ್ತಯ ಕೂಡ ಮಾಡಿದ್ರು.. ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಮೊದಲು ಪ್ರಾಣ ುಳಿಸಿಕೊಳ್ಳುವ ಕಡೆ ಗಮನ ಕೋಡೋಣ ಅಂತ ಕರೆ ನೀಡಿದ್ರು..
ಬಡವರಿಗೆ ಆಹಾರ ಪದಾರ್ಥ ವಿತರೆ ಕಾರ್ಯಕ್ರಮಕ್ಕೆ ಚಾಲನೆ
ಇನ್ನು ಮಾಲೂರಿನಲ್ಲಿ ಶಾಸಕ ನಂಜೇಗೌಡ ನೇತೃತ್ವದಲ್ಲಿ ಬಡವರಿಗೆ ಆಹಾರ ಪದಾರ್ಥ ಹಾಗೂ ತರಕಾರಿ ವಿತರಣೆಗೆ ಡಿಕೆ ಶಿವಕುಮಾರ್ ಚಾಲನೆ ನೀಡಿದ್ರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ, ಶಾಸಕ ನಂಜೇಗೌಡ, ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಇದ್ದರು.

ಕರ್ನಾಟಕ ಟಿವಿ, ಕೋಲಾರ