Devotional story
ಭಾಗವತ ಪುರಾಣದಲ್ಲಿ ಶ್ರೀ ಕೃಷ್ಣನ ಸವಿಸ್ತಾರವಾದ ವಿವರಣೆ ಇದೆ, ಭಾಗವತ ಪುರಾಣದ ಪ್ರಕಾರ ಶ್ರೀ ಕೃಷ್ಣನಿಗೆ ಎಂಟು ಪತ್ನಿಯರು , ಅವರು ರುಕ್ಮಿಣಿ ,ಸತ್ಯಭಾಮ ,ಜಾಂಬವತಿ ,ಕಾಳಿಂದಿ ,ಮಿತ್ರವಿಂದಾ ,ನಾಗ್ನಜಿತಿ ,ಭದ್ರ ಮತ್ತು ಲಕ್ಷ್ಮಣ. ಒಂದು ಕಥೆಯ ಪ್ರಕಾರ ಶ್ರೀ ಕೃಷ್ಣನಿಗೆ ೮೦ ಮಕ್ಕಳು ಅವರಲ್ಲಿ ಮುಖ್ಯವಾದವರೆಂದರೆ “ಸಾಂಬ”. ಯಾದವ ಕುಲ ವಿನಾಶದಲ್ಲಿ ಸಾಂಬನ ಪಾತ್ರ ಅತಿದೊಡ್ಡದು, ಹಾಗು ಇವನು ಜಾಂಬವತಿಯ ಪುತ್ರ ,ಇವನು ಬಹಳ ಕ್ರೂರಿ, ದುಷ್ಟ. ಆದಕಾರಣ ಒಮ್ಮೆ ಶ್ರೀಕೃಷ್ಣ ತನ್ನ ಮಗನಾದ ಸಾಂಬನ ವಿರುದ್ಧ ಕೋಪಗೊಳ್ಳುತ್ತಾನೆ ನಿನ್ನ ದುಷ್ಟತನದಿಂದಾಗಿ ನಮ್ಮ ಇಡೀ ವಂಶಕ್ಕೆ ಕಳಂಕ ತಟ್ಟುತ್ತಿದೆ , ನಿನ್ನ ಮುಖನೋಡಲು ನನಗೆ ಅಸಯ್ಯವಾಗುತ್ತಿದೆ ನಿನಗೆ ಕುಷ್ಠರೋಗ ಬರಲಿ ಎಂದು ಶಪಿಸುತ್ತಾನೆ , ಶ್ರೀಕೃಷ್ಣನ ಶಾಪದಿಂದ ಸಾಂಬ ಕುಷ್ಠ ರೋಗಕ್ಕೆ ತುತ್ತಾಗುತ್ತಾನೆ.
ತನ್ನ ಮಗನಿಗೆ ಬಂದೊದಗಿದ ದುರ್ಗತಿ ಕಂಡ ಜಾಂಬವತಿ ಬಹಳ ದುಃಖಿತಳಾಗುತ್ತಾಳೆ. ನಂತರ ಕಣ್ಣೀರಿಡುತ್ತಾ ಮಗನನ್ನ ಕ್ಷಮಿಸುವಂತೆ ಶ್ರೀ ಕೃಷ್ಣನ ಬಳಿ ಬೇಡಿಕೊಳ್ಳುತ್ತಾರೆ. ನಂತರ ಶ್ರೀ ಕೃಷ್ಣ ಆಕೆಯ ಮಾತಿಗೆ ಸಮ್ಮತಿಸುತ್ತಾರೆ. ನಂತರ ಸಾಂಬನ ಬಳಿ ಬಂದ ಶ್ರೀ ಕೃಷ್ಣ ಸೂರ್ಯದೇವನನ್ನು ಪ್ರಾರ್ಥಿಸಿ ಚಂದ್ರಭಾಗ ನದಿಯಲ್ಲಿ ಮುಳುಗು ಆಗ ನಿನಗೆ ಬಂದ ಕಾಯಿಲೆ ವಾಸಿಯಾಗುತ್ತದೆ ಎಂದು ಸಲಹೆ ನೀಡುತ್ತಾನೆ.
ಆಗ ಸಾಂಬನು ಕೃಷ್ಣನ ಬಳಿ ತಂದೆಯ ಈ ಸ್ಥಿತಿಯಲ್ಲಿ ನಾನು ಅಲ್ಲಿಗೆ ಹೇಗೆ ಹೋಗಲಿ ಎಂದು ಪ್ರಶ್ನಿಸುತ್ತಾನೆ. ಅದ್ದಕ್ಕೆ ಶ್ರೀ ಕೃಷ್ಣ ಹೇಗಾದರೂ ಹೋಗು ನಿನ್ನಿಷ್ಟ, ಆದರೆ ನದಿಯ ಬಳಿ ಹೋಗಬೇಕಷ್ಟೆ ಎಂದು ಹೇಳುತ್ತಾರೆ. ಆಗ ಸಾಂಬ ಕೃಷ್ಣನ ಕಾಲಿಡಿದು ಅಪ್ಪ ನಿಮಗೆ ನನ್ನ ಕಾಯಿಲೆ ವಾಸಿಮಾಡುವ ಶಕ್ತಿಇದೆ, ನೀವೇ ವಾಸಿಮಾಡಿ ಎಂದು ಹೇಳುತ್ತಾನೆ. ಆ ಸಂದರ್ಭದಲ್ಲಿ ಕೃಷ್ಣ ನಾನು ಈ ಕೆಲಸ ಮಾಡಲಾರೆ, ನಾನು ಕೊಟ್ಟಿರುವ ಸಲಹೆಯಂತೆ ಹೋಗು ಎನ್ನುತ್ತಾನೆ. ದುಃಖ ತಾಳಲಾರದೆ ಜಾಂಬವತಿ ಕೃಷ್ಣನ ಬಳಿ ಬಂದು ಮತ್ತೆ ಬೇಡಿಕೊಳ್ಳುತ್ತಾಳೆ. ಕಡೆಯದಾಗಿ ಶ್ರೀ ಕೃಷ್ಣ ತನ್ನ ಮಗನನ್ನು ಹೆಗಲಮೇಲೆ ಕೂರಿಸಿಕೊಂಡು ಚಂದ್ರಭಾಗ ನದಿಯ ಕಡೆ ತೆರಳುತ್ತಾರೆ, ನದಿಯ ತೀರದಲ್ಲಿ ಸಾಂಬ ಸೂರ್ಯನನ್ನು ಪ್ರಾರ್ಥಿಸಿ ಚಂದ್ರಭಾಗ ನದಿಯಲ್ಲಿ ಮುಳುಗುತ್ತಾನೆ ನಂತರ ಸಾಂಬನ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗುತ್ತದೆ ಹೀಗೆ ಸಾಂಬನ ಶಾಪ ಕೊನೆಗೊಳ್ಳುತ್ತದೆ.