ಕೆಆರ್ ಎಸ್ ಬೃಂದಾವನ ಪ್ರವೇಶಕ್ಕೆ ನಿರ್ಬಂಧ : ವ್ಯಾಪರಸ್ಥರಿಗೆ, ಕಾವೇರಿ ನೀರಾವರಿ ನಿಗಮಕ್ಕೆ ನಷ್ಟ

ಮೈಸೂರು: ಪ್ರವಾಸಿ ತಾಣವಾಗಿರುವ ಕೆಆರ್ ಎಸ್ ಬೃಂದಾವನವನ್ನು ಬಂದ್ ಮಾಡಲಾಗಿದೆ. ಬೃಂದಾವನದಲ್ಲಿ ಚಿರತೆ ಕಾಣಿಸಿದ ಹಿನ್ನೆಲೆ ಸುಮಾರು 15 ದಿಗಳಿಂದ ಉದ್ಯಾನವನವನ್ನು ಬಂದ್ ಮಾಡಲಾಗಿದೆ. ಅ. 21 ರಿಂದ ಬೃಂದಾವನದಲ್ಲಿ 4 ಸಲ ಚಿರತೆ ಕಾಣಿಸಿದೆ. ಹೀಗಾಗಿ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವವರೆಗೆ ಬೃಂದಾವನವನ್ನು ತೆರೆದಿಲ್ಲ. ಇನ್ನು ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು.

ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯಕ : ಮಾಜಿ ಸಿಎಂ ಸಿದ್ದರಾಮಯ್ಯ

ಬಂದ್ ಮಾಡಿರುವುದರಿಂದ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು, 15 ದಿನ ಮುಗಿದಿದ್ದರೂ ಚಿರತೆಯನ್ನು ಇನ್ನೂ ಸೆರೆ ಹಿಡಿದಿಲ್ಲವೆಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.ಬೃಂದಾವನಕ್ಕೆ ವೀಕೆಂಡ್ ನಲ್ಲಿ ಪ್ರವಾಸಿಗರು ಹೆಚ್ಚೆಚ್ಚು ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದರು. ಸದ್ಯ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ಮಾಡಿರುವುದರಿಂದ ವ್ಯಾಪರಸ್ಥರಿಗೆ, ಕಾವೇರಿ ನೀರಾವರಿ ನಿಗಮಕ್ಕೆ ನಷ್ಟವಾಗಿದೆ.

ರಾಜ್ಯದಲ್ಲಿ ಉಗ್ರರ ಸ್ಲೀಪರ್ ಸೆಲ್ ಗಳು ಇದ್ದಾಗ ನಾನು ಗೃಹ ಸಚಿವನಾಗಿದ್ದೆ: ಸಿಎಂ ಬೊಮ್ಮಾಯಿ

ಅನಾರೋಗ್ಯದಿಂದಾಗಿ ನಟ ಕಮಲ್ ಹಾಸನ್ ಚೆನ್ನೈನ ಆಸ್ಪತ್ರೆಗೆ ದಾಖಲು

About The Author