Monday, June 23, 2025

Latest Posts

KRS Dam : ಕೆಆರ್ ಎಸ್ ಡ್ಯಾಂ ನಲ್ಲಿ ಹೆಚ್ಚಾದ ನೀರು…! ಸಂತಸದಲ್ಲಿ ರೈತರು

- Advertisement -

Mandya News : ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು ಕೆರೆ ಕಟ್ಟೆಗಳು ತುಂಬಿವೆ. ಇದೀಗ ಮಂಡ್ಯದಲ್ಲಿಯೂ ಕೆಆರ್ ಎಸ್ ಡ್ಯಾಂ ನೀರು ಹೆಚ್ಚಳವಾಗಿ ರೈತರಿಗೆ ಖುಷಿ ಕೊಟ್ಟಿದೆ.

ಕಳೆದ ಐದು ದಿನಗಳಲ್ಲಿ ಅಣೆಕಟ್ಟೆಗೆ 12 ಅಡಿ ನೀರು ಹರಿದುಬಂದಿದೆ. ಜು.20ರಂದು 2235 ಕ್ಯುಸೆಕ್‌ ಒಳಹರಿವಿದ್ದು, ನೀರಿನ ಮಟ್ಟ90.25 ಅಡಿ ದಾಖಲಾಗಿತ್ತು.

ಜು.21ರಂದು 2276 ಕ್ಯುಸೆಕ್‌ ಒಳ ಹರಿವಿನೊಂದಿಗೆ 90.42 ಅಡಿಗೆ ಏರಿಕೆ ಕಂಡಿತು. ಜು.22ರಂದು ಒಳಹರಿವಿನ ಪ್ರಮಾಣ 7914 ಕ್ಯುಸೆಕ್‌ ಏರಿಕೆಯಾಗಿ 91.50 ಅಡಿ ತಲುಪಿತು. ಜು.23ರಂದು 16848 ಕ್ಯುಸೆಕ್‌ ಒಳಹರಿವು ದಾಖಲಾಗಿ ನೀರಿನ ಮಟ್ಟ92.60 ಅಡಿಗೆ ಏರಿದರೆ, ಜು.24ರಂದು 29,552 ಕ್ಯುಸೆಕ್‌ ಒಳ ಹರಿವಿನೊಂದಿಗೆ 95 ಅಡಿಗೆ ಹೆಚ್ಚಳವಾಗಿದೆ.

ಅಂದು ರಾತ್ರಿ ವೇಳೆಗೆ 44436 ಕ್ಯುಸೆಕ್‌ಗೆ ಒಳಹರಿವು ಹೆಚ್ಚಾಯಿತು. ಇದರೊಂದಿಗೆ ನೀರಿನ ಮಟ್ಟ97.50 ಅಡಿಗೆ ಏರಿತು. ಮಂಗಳವಾರ ಬೆಳಗ್ಗೆ 48025 ಕ್ಯುಸೆಕ್‌ ಒಳಹರಿವು ದಾಖಲಾಗಿ ಜಲಾಶಯದ ನೀರಿನ ಮಟ್ಟ100 ಅಡಿ ತಲುಪಿತು.

ಕೊಡಗಿನಲ್ಲಿ ಇದೇ ರೀತಿ ಇನ್ನಷ್ಟುದಿನಗಳವರೆಗೆ ಮಳೆ ಮುಂದುವರೆದರೆ ಕೆಆರ್‌ಎಸ್‌ ಜಲಾಶಯಕ್ಕೆ ಇನ್ನೂ ಹೆಚ್ಚಿನ ಒಳಹರಿವು ದಾಖಲಾಗಿ ನೀರಿನ ಮಟ್ಟದಲ್ಲಿ ಮತ್ತಷ್ಟುಏರಿಕೆಯಾಗುವ ಸಾಧ್ಯತೆಗಳಿವೆ.

ಕೆಆರ್‌ಎಸ್‌ ಅಣೆಕಟ್ಟು ದಿನೇ ದಿನೇ ಮೈದುಂಬಿಕೊಳ್ಳುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಬೆಳೆಗಳಿಗೆ ನೀರು ಸಿಗುವ ಆಶಾಭಾವನೆ ಮೂಡುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಸನ್ನದ್ಧರಾಗುತ್ತಿದ್ದಾರೆ.

Rain : ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ಶವ ಪತ್ತೆ

MB Pateel : ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ..!

Meeting : ಅತಿವೃಷ್ಟಿ ಹಿನ್ನೆಲೆ ಜಿ.ಪಂ. ಸಿಇಒಗಳೊಂದಿಗೆ ಸಿಎಂ ಡಿಸಿಎಂ ಸಭೆ

- Advertisement -

Latest Posts

Don't Miss