ಧರ್ಮಸ್ಥಳದಲ್ಲಿ ಕಾರ್ಯನಿರತರಾಗಿದ್ದ ಡಿಜಿಟಲ್ ಮಾಧ್ಯಮದ ಮೇಲೆ ಮತ್ತು ಇತರೆ ಪತ್ರಕರ್ತರ ಮೇಲೂ ಕೆಲವು ಪುಂಡರು ನಡೆಸಿರುವ ಹಲ್ಲೆ , ಅಭಿವ್ಯಕ್ತಿ ಸ್ವತಂತ್ರದ ಮೇಲೆ ನಡೆದ ದಾಳಿ ಆಗಿದೆ.
ವಸ್ತುಸ್ಥಿತಿಯನ್ನು ವರದಿ ಮಾಡಲು ಹೋದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಈ ಗುಂಪು ಟಾರ್ಗೆಟ್ ಮಾಡಿರುವುದು ಹೇಯ ಕೃತ್ಯ. ಧರ್ಮಸ್ಥಳದ ಘನತೆಗೆ ಈ ಪುಂಡರು ಚ್ಯುತಿ ತಂದಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿರುವ ವಿದ್ಯಮಾನಗಳು ದೇಶದ ಗಮನಸೆಳೆದಿದ್ದು, ಸಹಜವಾಗಿ ಡಿಜಿಟಲ್ ಮಾಧ್ಯಮಗಳೂ ಸಹ ವರದಿ ಮಾಡಲು ಹೋಗಿದ್ದರಲ್ಲಿ ತಪ್ಪೇನಿದೆ? ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಆಗಿದೆ. ಚಾನೆಲ್ನ ವರದಿಗಾರರ ಮೇಲೂ ಹಲ್ಲೆ ನಡೆದಿದ್ದು ಇದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ.
ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ಹಲ್ಲೆ ನಡೆಸಿದ ಪುಂಡರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಡಿಜಿಟಲ್ ಮಾಧ್ಯಮ ಸೇರಿ ಹಲವು ಮಾಧ್ಯಮಗಳ ಪ್ರತಿನಿಧಿಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ರಕ್ಷಣೆ ನೀಡಬೇಕು ಎಂದು ರಾಜ್ಯದ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಆಗ್ರಹಪಡಿಸುತ್ತೇವೆ.
ಇದೊಂದು ಸೂಕ್ಷ್ಮ ವಿಚಾರ ಆಗಿದ್ದು, ವರದಿ ಮಾಡಬೇಕಾದರೆ ಸಮತೋಲನ ಮತ್ತು ಸಂಯಮದಿಂದ ವರದಿ ಮಾಡಬೇಕೆಂದು ವೃತ್ತಿ ಬಾಂಧವರನ್ನು ವಿನಂತಿಸುತ್ತೇನೆ.
ಸಮೀವುಲ್ಲಾ, ಅಧ್ಯಕ್ಷರು KSDMF
ಶಿವಕುಮಾರ್ ಬೆಸಗರಹಳ್ಳಿ, ಪ್ರಧಾನ ಕಾರ್ಯದರ್ಶಿ KSDMF
ಹಾಗೂ ಎಲ್ಲಾ ಪದಾಧಿಕಾರಿಗಳು KSDMF