ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸಕ್ಕೆ ಮತ್ತು ಪೈಶಾಚಿಕ ಕೃತ್ಯಕ್ಕೆ ನಗರದ ಜನತೆ ಭಯಭೀತರಾಗಿ ಕೇಂದ್ರದ ರಾಜಕೀಯ ನಾಯಕರಿಗೆ ಎಸ್ ಆರ್ ಪಾಟೀಲ್ ಎನ್ನುವವರು ಪತ್ರ ಬರೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಬಹಳ ಚರ್ಚೆಗೆ ಕಾರಣವಾಗಿರುವ ಸಂದೀಪ್ ಸೊಲಂಕೆ ಎನ್ನುವ ಯುವಕನ ಬೆತ್ತಲೆ ವೀಡಿಯೋ ಈಗ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಅಂಗಳಕ್ಕೆ ತಲುಪಿದೆ. ರೌಡಿಗಳ ಪೈಶಾಚಿಕ ಕೃತ್ಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದೂ ಪುಡಿ ರೌಡಿಗಳನ್ನು ಸದೆಬಡಿಯಲು ಸ್ಥಳಿಯ ಪೋಲಿಸರು ವಿಫಲರಾರಿದ್ದಾರೆ
ಪ್ರಕರಣ ನಡೆದು ನಾಲ್ಕು ತಿಂಗಳಾದರೂ ಪೋಲಿಸರು ರೌಡಿಗಳನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಅದಲ್ಲದೆ ಪೋಲಿಸರೇ ಅವರಿಗೆ ಸಾಥ್ ನೀಡುತ್ತಾರೆ ಎಂಬ ಆರೋಪಗಳು ಸಹ ಜನರಿಂದ ಕೇಳಿಬಂದಿದೆ.ಹಾಗಾಗಿ ರಾಜ್ಯದ ಪೊಲೀಸ್ ಇಲಾಖೆಯಿಂದ ಪರಿಹಾರ ಸಿಗದ ಈ ಪ್ರಕರಣಕ್ಕೆ ಕೆಂದ್ರದಿಂದ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ನಗರದ ಜನತೆ ಪತ್ರ ಬರೆದಿದ್ದಾರೆ. ಇನ್ನು ಈ ಪತ್ರವನ್ನು ಪ್ರಧಾನಿ ಮತ್ತು ಅಮಿತ್ ಶಾ ಸೇರಿ ಕೆಂದ್ರದ 13 ನಾಯಕರಿಗೆ ಎಸ್ ಆರ್ ಪಾಟೀಲ್ ಎನ್ನುವವರು ಪತ್ರ ಬರೆದಿದ್ದಾರೆ.
Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ
HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ
Sharavathi :ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆ