ಮಧ್ಯಪ್ರದೇಶ್: ಕಳೆದ ಎರಡು ವಾರಗಳ ಹಿಂದೆ ಮಧ್ಯಪ್ರಧೇಶದ ಕುಬ್ರಿ ಗ್ರಾಮದಲ್ಲಿ ಬಿಜೆಪಿ ನಾಯಕನೊಬ್ಬ ಬೀದಿ ಪಕ್ಕದಲ್ಲಿ ಮಲಗಿರುವ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಎರಡು ದಿನಗಳ ಹಿಂದೆ ನಮ್ಮ ಲೇಖನೆಯಲ್ಲಿ ಬರೆಯಲಾಗಿತ್ತು . ಈ ರೀತಿಯ ವ್ಯಕ್ತಿಗಳಿಗೆ ಸಮಾಜದಲ್ಲಿ ಜಾಗ ಕೊಡಬಾರದು ಎಂದು ಪೋಟೊ ನೋಡಿದ ಸಾಕಷ್ಟು ನೆಟ್ಟಿಗರು ಮೂತ್ರ ವಿಸರ್ಜನೆ ಮಾಡಿರುವ ಪ್ರವೇಶ್ ಶುಕ್ಲಾ ಇನ್ನುವ ಬಿಜೆಪಿ ನಾಯಕನ ವಿರುದ್ದ ಬಹಿಷ್ಕಾರ ಹೇರಿದ್ದರು
ಹಾಗೆಯೆ ಇವನಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಸಹ ಹೇಳಿದ್ದರು . ಅದರಂತೆಯೆ ಆರೋಪಿ ಹುಡುಕಾಟದಲ್ಲಿ ನಿರತರಾಗಿದ್ದ ಪೋಲಿಸರು ಕೊನೆಗೂ ಉಶಸ್ವಿಯಾಗಿದ್ದಾರೆ. ಈಗ ಪೋಲಿಸರು ಆರೋಪಿಯನ್ನು ಬಂದಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಜುಲತಾ ಪಟ್ಲಿ ತಿಳಿಸಿದ್ದಾರೆ.
ಇದೀಗ ವಿರುದ್ದ 294,504 ಎಸ್ಸಿ ಎಸ್ಟಿ ಕಾಯಿದೆಯಡಿ ಶಿಕ್ಷೆ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ.ಇಂತಹವರನ್ನು ಕಠೀಣ ಶಿಕ್ಷೆ ಕೊಡಿಸಲಾಗುಚವುದು ಎಂದು ಮಧ್ಯಪ್ರಧೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.