Shivarathri News:
Feb:18: ಮಹಾಶಿವರಾತ್ರಿ ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ. ಹೀಗಾಗಿ ಇಂದು ರಾಜ್ಯದೆಲ್ಲೆಡೆ ಶಿವನ ಆರಾಧನೆ, ಪೂಜೆ ಜೋರಾಗಿದೆ. ಆಡಂಬರಗಳಿಂದ ಮುಕ್ತನಾಗಿ ಹಾವನ್ನೇ ಆಭರಣವಾಗಿ ತೊಟ್ಟು, ಭಸ್ಮ ಬಳಿದುಕೊಂಡು, ಹುಲಿ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿ ವಾಸಿಸುವ ಸರಳ ಮತ್ತು ಅಮೋಘ ಶಕ್ತಿಯ ಭೋಲೇಶಂಕರನಿಗೆ ಇಂದು ಭಕ್ತರು ನಾನಾ ರೀತಿಯಲ್ಲಿ ಪೂಜಿಸಿ ಅವನ ಕೃಪೆಗೆ ಪಾತ್ರರಾಗುತ್ತಾರೆ.
ನಾಡಿನೆಲ್ಲೆಡೆ ಇಂದು ಶಿವನಾಮ ಸ್ಮರಣೆಯೇ ಭಕ್ತರಿಗೆ ಬಲು ಪ್ರಿಯ.ಭಕ್ತಾಧಿಗಳು ನಾಡಿನೆಲ್ಲೆಡೆ ಇಂದು ಶಿವ ನಾಮ ಜಪದಲ್ಲಿ ತೊಡಗಿ ದೇವಾಲಯಗಳಿಗೆ ಭೇಟಿ ನೀಡಿ ಸಂಭ್ರಮಿಸುತ್ತಾರೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಶಿವ ದೇವಾಲಯಗಳು ಇಂದು ಸಂಪೂರ್ಣ ಭಕ್ತರಿಂದ ತುಂಬಿಕೊಂಡಿದೆ.
ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? MAHA SHIVARATHRI SPECIAL
ಮಹಾ ಶಿವ ಎಂದಿಗೂ ಯಾರ ಧ್ಯಾನ ಮಾಡುತ್ತಾನೆ..? MAHA SHIVARATHRI SPECIAL