ಜಿಲ್ಲಾ ಸುದ್ದಿ: ದೇಶದಲ್ಲಿ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಏಕೈಕ ಖಾದಿ ಕೇಂದ್ರಕ್ಕೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪಡೆದಿರುವ ಸಂಘಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆಗಳನ್ನು ತಿಳಿಸಿದರು.
ರಾಜ್ಯ ಸರ್ಕಾರ ನೀಡುವ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಪಡೆದಿರುವ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ದೇಶದ ಏಕೈಕ ಖಾದಿ ಕೇಂದ್ರವಾದ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಅಭಿನಂದನೆಗಳು.
ಕಳೆದ ಏಳು ದಶಕಗಳಿಂದ ರಾಷ್ಟ್ರಧ್ವಜದ ಬಟ್ಟೆ ತಯಾರಿಸುತ್ತಿರುವ ಖಾದಿ ಕೇಂದ್ರವು ಈ ಬಾರಿ ಪೂರ್ಣಪ್ರಮಾಣದ ರಾಷ್ಟ್ರಧ್ವಜ ತಯಾರಿಕೆಯ ಅವಕಾಶವನ್ನೂ ಪಡೆದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.
ಮಹಾತ್ಮ ಗಾಂಧೀಜಿಯವರ ಗ್ರಾಮಾಭಿವೃದ್ಧಿ, ಗುಡಿಕೈಗಾರಿಕೆ ಮತ್ತು ಮಹಿಳಾ ಸಬಲೀಕರಣದ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿರುವ ಗರಗ ಕ್ಷೇತ್ರಿಯ ಸೇವಾ ಸಂಘಕ್ಕೆ ಇನ್ನಷ್ಟು ಗೌರವ ಮತ್ತು ಮಾನ್ಯತೆ ಸಿಗಲಿ ಎಂದು ಹಾರೈಸುತ್ತೇನೆ.
ಗರಗ ಕ್ಷೇತ್ರೀಯ ಸೇವಾ ಸಂಘದ ಎಲ್ಲ ಕಾರ್ಯಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ನೆರವು- ಸಹಕಾರ ನೀಡಲಿದೆ.
Karnataka Lokayukta: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಪುರಸಭೆ ಅಧಿಕಾರಿ..!