Sunday, September 8, 2024

Latest Posts

ಬೆಂಗಳೂರಿನಲ್ಲಿ ಮಲೆನಾಡಿಗರ ಸ್ನೇಹ ಶೃಂಗ

- Advertisement -

ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರು ಒಂದೆಡೆ ಸೇರುವ ಉದ್ದೇಶದಿಂದ ಸ್ನೇಹ ಶೃಂಗ ಎನ್ನುವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮ ಅಕ್ಟೋಬರ್ 20ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಭಾವಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ. ನಂತರ ಒಂದು ಮಲೆನಾಡ ಸೀಮೆಯಲ್ಲಿ ಅನ್ನೋ ಹಾಡು, ಹಾಸ್ಯ, ಹರಟೆಯ ಕಾರ್ಯಕ್ರಮ ಇರಲಿದ್ದು.. ಇದಾದಬಳಿಕ.. ಖ್ಯಾತ ಹಿನ್ನೆಲೆ ಗಾಯಕಿ ಬಿ ಕೆ ಸುಮಿತ್ರಾ ಅವ್ರಿಗೆ ಸನ್ಮಾನ ನಡೆಯಲಿದೆ. ಈ ಸಮಯದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಜಯಂತ್ ಕಾಯ್ಕಿಣಿ, ಕಿಮ್ಮನೆ ರತ್ನಾಕರ್ ಭಾಗವಹಿಸಲಿದ್ದು, ಶಾಸಕ ಟಿ.ಡಿ ರಾಜೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಮಲೆನಾಡಿಯ ಊಟ ಶೈಲಿಯ ವ್ಯವಸ್ಥೆ ಮಾಡಲಾಗಿದೆ. ಇದೇ ಭಾನುವಾರ ಆನಂದರ್ ರಾವ್ ಸರ್ಕಲ್ ಬಳಿಯ ಕೆಇಬಿ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಲಿದ್ದು, ಮಲೆನಾಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಕರು ಮನವಿ ಮಾಡಿದ್ದಾರೆ.

- Advertisement -

Latest Posts

Don't Miss