Thursday, March 13, 2025

Latest Posts

ಮಂಡ್ಯದ ವಿ. ಸಿ. ಫಾರ್ಮ್ ನಲ್ಲಿ ಬೃಹತ್ ಕೃಷಿ ಮೇಳ

- Advertisement -

ಮಂಡ್ಯ: ಮಂಡ್ಯದ ವಿ.ಸಿ ಫಾರ್ಮ್ ನಲ್ಲಿ ಕೃಷಿ ಮೇಳ ಎರ್ಪಡಿಸಿದ್ದು, ಜನರು ಹಾಗೂ ರೈತರು ನಿರೀಕ್ಷೆಗೂ ಮೀರಿ ಬಂದು ವಿ.ಸಿ. ಫಾರ್ಮ್ ನಲ್ಲಿ ಕೃಷಿ ಮೇಳವನ್ನು ವೀಕ್ಷಿಸಿದರು. ಇನ್ನು ಬೆಂಗಳೂರು ವಿ.ವಿ. ಕೃಷಿ ವಿದ್ಯಾಲಯದ ಕುಲಪತಿ  ಎಸ್. ವಿ .ಸುರೇಶ್ ಉದ್ಘಾಟನೆ ಮಾಡಿದರು. ಕುಲಪತಿ ಎಲ್ಲವನ್ನೂ ವೀಕ್ಷಣೆ ಮಾಡಿ ರೈತರಿಗೆ ಹಾಗೂ ಜನರಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ಮಾಜಿ ಮತ್ತು ಹಾಲಿ ಶಾಸಕರ ನಡುವೆ ಟಾಕ್ ಫೈಟ್

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ: ಎಸ್.ವಿ ಸುರೇಶ್ ಅವರು ಮಾತನಾಡಿ ಸಂಶೋಧನಾ ಕೇಂದ್ರವಾದ ವಿ.ಸಿಫಾರಂನಲ್ಲಿ ಮಂಡ್ಯ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಯ ರೈತರಿಗೆ ಕೃಷಿ ನಡೆಸಲು ಬೇಕಿರುವ ತಾಂತ್ರಿಕತೆಯ ಬಗ್ಗೆ ತಿಳಿದುಕೊಂಡು ಕೃಷಿ ಮೇಳದಲ್ಲಿ ಪ್ರತ್ಯಕ್ಷಿಕೆಯಲ್ಲಿ ಸುಧಾರಿತ ತಳಿಗಳು ಹಾಗೂ ಬಿಡುಗಡೆಗೆ ಸಿದ್ಧವಿರುವ ತಳಿಗಳನ್ನು ಅನಾವರಣಗೊಳಿಸಲಾಗಿದೆ. ಮೇಳದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಸಂವಾದದಲ್ಲಿ ರೈತರು ತಮಗೆ ಇರುವ ಸಂಶಯಗಳನ್ನು ನೇರವಾಗಿ ವಿಜ್ಞಾನಿಗಳೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಬಹುದು ಎಂದು ಹೇಳೀದರು.

ಹೊಳೆಯುವ ತ್ವಚೆಗಾಗಿ ಹೀಗೆ ಮಾಡಿ.. ಹೊಳೆಯುವುದು ಗ್ಯಾರಂಟಿ..!

‘ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಕೈಗೊಂಡಿದೆ ಕನ್ನಡ ರಥ’

- Advertisement -

Latest Posts

Don't Miss