ಕರ್ನಾಟಕ ಟಿವಿ : ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರ ಬೆಳೆಗಳಾದ ಎಲೆಕೋಸು ಕಲ್ಲಂಗಡಿ ಸಂಪಿಗೆ ಹೂವು ಟಮೋಟೋ ತರಕಾರಿಗಳು ಸಾಕಷ್ಟು ನಷ್ಟವನ್ನು ರೈತರು ಅನುಭವಿಸಿದ್ದು ಮಾಜಿ ಸಚಿವರುಗಳಾದ ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಭೇಟಿ ನೀಡಿ ರೈತರ ಕಷ್ಟನಷ್ಟಗಳನ್ನು ಆಲಿಸಿ ಸಂತೈಸಿದರು. ಇಂದು ಬಿಂಡಿಗನವಿಲೆ ಹೋಬಳಿಯ ಶಿವನಹಳ್ಳಿ ಗ್ರಾಮದ ರೈತರ ಶಿವರಾಜು ಬೆಳೆದಂತಹ ಸಂಪಿಗೆ ಹೂವು ಕಟಾವಿಗೆ ಬಂದಿದ್ದು ಯಾರು ಕೂಡ ಕೇಳುತ್ತಿಲ್ಲ ಜೊತೆಗೆ ತಾಲ್ಲೂಕ ಆಡಳಿತವು ಕೂಡ ರೈತರ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಪಿ ನೇರಲಕೆರೆ ಗ್ರಾಮದ ಶಿವಲಿಂಗೇಗೌಡ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಂತಹ ಟಮೋಟದ ಬೆಂಬಲ ಬೆಲೆ ಇಲ್ಲ ಎಂದು ತಿಪ್ಪೆ ಹಾಗು ಬಯಲಿಗೆ ಸುರಿದಿದ್ದು ಮಾಜಿ ಸಚಿವರು ಗಳು ವೀಕ್ಷಿಸಿದರು ನಂತರ ಮಾತನಾಡಿದ ಚೆಲುವರಾಯಸ್ವಾಮಿ ರೈತರ ಬದುಕು ಮುಖ್ಯ ಎಲ್ಲರಿಗೂ ಅನ್ನ ಕೊಡುವಂತಹ ರೈತನ ಪರಿಸ್ಥಿತಿ ಈ ರೀತಿ ಆದರೆ ಬದುಕು ಕಷ್ಟಕರವಾಗುತ್ತದೆ ಜಿಲ್ಲಾಡಳಿತ ಈ ಬಗ್ಗೆ ತಕ್ಷಣದಿಂದಲೇ ಕಾರ್ಯ ಪ್ರಮುಖರಾಗಿ ರೈತರ ನೆರವಿಗೆ ಭಾವಿಸಬೇಕೆಂದು ತಿಳಿಸಿದರು.
ಕರೋನ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ರಾಜ್ಯದ ಪ್ರತಿ ಹಳ್ಳಿಯ ಕುಂದುಕೊರತೆಗಳನ್ನು ಕ್ರೋಡೀಕರಿಸಿ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಚಲುವರಾಯಸ್ವಾಮಿ ಭರವಸೆ ನೀಡಿದ್ರು.
ಜೊತೆಗೆ ಸಾರ್ವಜನಿಕರು ಮತ್ತು ರೈತರು ಮನೆಯಲ್ಲೇ ಇದ್ದು ಈ ಮಹಾಮಾರಿಯನ್ನು ತೊಲಗಿಸಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಕರೋನ ವೈರಸ್ ಇರುವ ಸಮಯದಲ್ಲಿ ರಾಜಕಾರಣ ಬೆರೆಸಬಾರದು ಎಂದು ಕಳೆದ 20 ದಿನಗಳಿಂದ ನಮ್ಮ ಕಾಂಗ್ರೆಸ್ ಪಕ್ಷವು ಸಹಕಾರ ನೀಡುತ್ತಾ ಬಂದಿದೆ ನಾವು ಸ್ಥಳೀಯ ಮಟ್ಟದ ರೈತರ ಬದುಕು ಬೆಳೆ ವೀಕ್ಷಿಸಿದಾಗ ಬೇಸರವಾಗುತ್ತದೆ ಅರ್ಧ ಲೀಟರ ಹಾಲು ರೈತನ ಖಾತೆಗೆ 500 ರೂಪಾಯಿ ಜಮಾ ಮಾಡಿದರೆ ರೈತನ ಕಷ್ಟ ಪರಿಹರಿಸುವುದಿಲ್ಲ ಏಕೆಂದರೆ ರೈತರು ಬೆಳೆಯುವ ಬೆಳೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುತ್ತಾರೆ ಇಂತಹ ಸಮಯದಲ್ಲಿ ಹಾಕಿದ ಬಂಡವಾಳವೂ ಕೂಡ ರೈತನ ಕೈ ಸೇರುವುದಿಲ್ಲ ಆದುದರಿಂದ ರೈತರಿಗೆ ಲಾಭ ಬೇಡ ಆತನ ಬಂಡವಾಳವಾದ ಅಸಲು ನ್ನದರೂ ತುಂಬು ಕೊಡುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಕ್ರಮವಹಿಸಬೇಕು. ಜೀವನಾಡಿ ರೈತನ ಉಳಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣದಿಂದಲೇ ರೈತರ ನೆರವಿಗೆ ದಿವಿಸಬೇಕೆಂದು ಚಲುವರಾಯಸ್ವಾಮಿ ಒತ್ತಾಯಿಸಿದ್ರು.
ಪ್ರವೀಣ್ ಕುಮಾರ್ ಜಿ.ಟಿ. ಕರ್ನಾಟಕ ಟಿವಿ, ಮಂಡ್ಯ