Friday, October 18, 2024

Latest Posts

ಮಂಡ್ಯ: ಸೌಡಿ ನೌಕರರು ಹಾಗೂ ವಾಹನ ಚಾಲಕರ ಪ್ರತಿಭಟನೆ

- Advertisement -

Mandya News:

ವಿ.ಸಿ.ನಾಲಾವಿಭಾಗ ಮಂಡ್ಯ ವ್ಯಾಪ್ತಿಯಲ್ಲಿ 06 ಉಪ ವಿಭಾಗಗಳಿದ್ದು, ಸುಮಾರು 250 ಮಂದಿ ಸೌಡಿ ನೌಕರರು ಹಾಗೂ ವಾಹನ ಚಾಲಕರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೂನ್-2022ರ ಮಾಹೆಯಿಂದ ಇದುವರೆವಿಗೂ ವೇತನ ಪಾವತಿಸಿರುವುದಿಲ್ಲ. ದಿನಾಂಕ: 11-08-2022ರಂದು ನಿಗಮದಿಂದ ವೇತನ ಬಿಡುಗಡೆಯಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇದುವರೆವಿಗೂ ವೇತನ ನೀಡಿರುವುದಿಲ್ಲ ಹಾಗೂ ಇ.ಎಸ್.ಐ. ಮತ್ತು ಇ.ಪಿ.ಎಫ್.ನಲ್ಲಿ ವ್ಯತ್ಯಾಸವಿದ್ದು,ವ್ಯತ್ಯಾಸವನ್ನು ಸಹ ಬಗೆಹರಿಸಿರುವುದಿಲ್ಲ. ಪ್ರತಿ ತಿಂಗಳ ಮಾಹೆ 05ನೇ ತಾರೀಖಿನೊಳಗೆ ವೇತನ ಪಾವತಿಸಬೇಕಾಗಿರುತ್ತದೆ. ಆದರೆ ವೇತನ ಪಾವತಿ ಮಾಡಿರುವುದಿಲ್ಲ. ಆದುದರಿಂದ ಈ ಇಲಾಖೆಯಲ್ಲಿ ದುಡಿಯುತ್ತಿರುವ ನೌಕರರ ಕುಟುಂಬ ಜೀವನ ನಿರ್ವಹಣೆಯು ತುಂಬಾಕಷ್ಟಕರವಾಗಿರುತ್ತದೆ. ಇದರಿಂದ ಬೆಸತ್ತ ನೌಕರರು ಹಾಗೂ ಸಂಘವು ದಿನಾಂಕ: 12-09-2022ರಿಂದ ವಿ.ಸಿ.ನಾಲಾ ವಿಭಾಗ, ಮಂಡ್ಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ಕ್ರಮಕೈಗೊಂಡಿರುತ್ತದೆ .ಎಂದು ಕಾವೇರಿ ನೀರಾವರಿ ನಿಗಮ ಮಂಡಳಿಯ ಮುಂದೆ ಪ್ರತಿಭಟನೆ ನಡೆಸಿದರು .

“ನೆರೆಗೆ ಮೂಲ ಪುರುಷರು ಯಾರೆಂದು ದಾಖಲೆ ಬಿಡುಗಡೆ ಮಾಡ್ತೀನಿ” : ಆರ್ ಅಶೋಕ್

ವಿಧಾನಸಭೆಯ ಉಪ ಸಭಾಪತಿ ಆನಂದ ಮಾಮನಿ ಆಸ್ಪತ್ರೆಗೆ ದಾಖಲು

ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆ: ನಕಲಿ ವಾಚ್ ಮಾರಟ ಜಾಲ ಪತ್ತೆ

- Advertisement -

Latest Posts

Don't Miss