Friday, June 20, 2025

Latest Posts

ಕೊರೊನಾಗೆ ಸಾವು ಎಂದು ಸುಳ್ಳು ಸುದ್ದಿ – ಯುವಕನ ಬಂಧನ

- Advertisement -

ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹಕ್ಕಿಮಂಚನಹಳ್ಳಿ  ಗ್ರಾಮದ ಸುನಿಲ್(20) ಕರೋನಾದಿಂದ ಸತ್ತಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ಟಿವಿ 9 ವಾಹಿನಿಯಲ್ಲಿ ಪ್ರಸಾರವಾಗಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅಂಬಿಗರಹಳ್ಳಿಯ ಯುವಕ  ಮುತ್ತುರಾಜ್ (19)ನನ್ನು ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡರು ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ ಎಂಬ ಸುಳ್ಳು ಸುದ್ಧಿಯಿಂದ ಮನನೊಂದಿದ್ದ ಯುವಕ ಸುನಿಲ್ ದೂರು ನೀಡಿದ್ರು.. ನಂತರ ಕಾರ್ಯಪ್ರವೃತ್ತರಾದ  ರಾತ್ರಿಯಿಡೀ ವಾಟ್ಸಪ್ ಮೂಲಕ್ಕಾಗಿ ಹುಡುಕಾಟ ನಡೆಸಿದಾಗ ಮುತ್ತುರಾಜ್ ಎಂಬಾತನ ವಾಟ್ಸಪ್ ನಂಬರ್ ನಿಂದ  ಮೊದಲಿಗೆ ವೈರಲ್ ಆಗಿರುವುದನ್ನು  ಪತ್ತೆ ಹಚ್ಚಿದ್ದಾರೆ..  ಸುಳ್ಳು ಸುದ್ಧಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ಉಂಟಾಗುವಂತೆ ಮಾಡಿದ್ದ ಆರೋಪಿ ಅಂಬಿಗರಹಳ್ಳಿಯ ಯುವಕ ಮುತ್ತುರಾಜ’ನನ್ನು ಬಂಧಿಸಿದ್ದಾರೆ. 

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ರುವ ಕ್ರಿಯಾಶೀಲ  ಅಧಿಕಾರಿ  ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪರಶುರಾಮ್, ನಾಗಮಂಗಲ ಡಿವೈಎಸ್ ಪಿ   ಕೆ.ಬಿ.ವಿಶ್ವನಾಥ ಕೆ.ಆರ್.ಪೇಟೆ ವೃತ್ತದ  ಸಿಪಿಐ ಕೆ.ಎನ್. ಸುಧಾಕರ್ ಸೇರಿದಂತೆ ಮೇಲಧಿಕಾರಿಗಳು ಅಭಿನಂದಿಸಿದ್ದಾರೆ.

ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=yYxL5nAq98Y
- Advertisement -

Latest Posts

Don't Miss