- Advertisement -
ಕರ್ನಾಟಕ ಟಿವಿ ಮಂಡ್ಯ : ಕೊರೊನಾ ವಿರುದ್ದದ ರಕ್ಷಣಾ ಕಾರ್ಯದಲ್ಲಿ ಪೊಲೀಸರು ಹಗಲು ರಾತ್ರಿ ಕಾರ್ಯನಿರ್ವಣೆ ಮಾಡ್ತಿದ್ದಾರೆ.. ಕೆಲಜನರ ಪುಂಡಾಟವನ್ನ ತಾಳ್ಮೆಯಿಂದ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ.. ಪೊಲೀಸರ ಕಾರ್ಯಕ್ಕೆ ಮೆಚ್ಚಿದ ಜನ ಹೂ ಮಳೆಯನ್ನೇ ಸುರಿಸಿದ್ದಾರೆ.. ಹೌದು ಮಂಡ್ಯ ನಗರದ ಪೇಟೆ ಬೀದಿಯಲ್ಲಿ ಪೊಲೀಸರ ಪರೇಡ್ ವೆಳೆ ಪುಷ್ಪ ವೃಷ್ಟಿಗೈದು ಅದ್ದೂರಿ ಸ್ಚಾಗತ ಕೋರಿದ್ದಾರೆ.. ಪುಷ್ಪ ಮಳೆ ಸುರಿಸುತ್ತಾ ಕೊರೊನಾ ರಕ್ಷಣಾ ಕಾರ್ಯದಲ್ಲಿರೋ ಪೊಲೀಸರು ಮತ್ತು ಭಾರತ ಮಾತೆಗೆ ಜನರು ಜೈಕಾರ ಸಹ ಹಾಕಿದ್ದಾರೆ.. ಸಾರ್ವಜನಿಕರ ಪ್ರಶಂಸೆಯ ಜೈಕಾರಕ್ಕೆ ಪೊಲೀಸರು ಫುಲ್ ಖುಷ್ ಆಗಿದ್ದಾರೆ..

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ



- Advertisement -