Tuesday, June 3, 2025

Latest Posts

ಇ-ಶ್ರಮ್ ಹಾಗೂ ಪಿಎಂ-ಎಸ್ ವೈಎಂ ಯೋಜನೆಗೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ಚಾಲನೆ

- Advertisement -

Mandya News:

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಾದ ಇ-ಶ್ರಮ್ ಮತ್ತು ಪಿಎಂ-ಎಸ್ ವೈಎಂ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮತ್ತು ಸ್ಥಳದಲ್ಲಿ ನೊಂದಣಿ ಮಾಡಿಸುವ ಸಲುವಾಗಿ ಮಾಹಿತಿ ವಾಹನಗಳ ಜಾಥಾ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿಂದು ಇ-ಶ್ರಮ ಹಾಗೂ ಪಿಎಂ-ಎಸ್ ವೈಎಂ ಯೋಜನೆಯ ಮೂರು ವಾಹನಗಳಿಗೆ ಚಾಲನೆ ನೀಡಿದರು.

ಕಾರ್ಮಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾದೇವಿ ಮಾತನಾಡಿ ಅಸಂಘಟಿತ ಕಾರ್ಮಿಕರಿಗೋಸ್ಕರ ಈ ಯೋಜನೆ ಲಭ್ಯವಿದ್ದು, ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಿ ಎಂದರು.ಇ-ಶ್ರಮ ಯೋಜನೆಯಡಿಯಲ್ಲಿ ಯಾವ ರೀತಿ ನೋಂದಣಿ ಮಾಡಿಕೊಳ್ಳಬೇಕು ಇದರ ಪ್ರಯೋಜನಗಳೇನು ಎಂಬುದನ್ನು ಮಾಹಿತಿ ವಾಹನಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಬಾಲ್ಯ ಮತ್ತು ಕಿಶೋರ ವ್ಯವಸ್ಥೆಯ ಕಾರ್ಮಿಕ ಕಾಯ್ದೆ ಅಡಿಯಲ್ಲಿ ಜಾಗೃತಿ ಅಭಿಯಾನ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒಂದು ವಾಹನದಲ್ಲಿ ಎಲ್ಇಡಿ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಮಂಡ್ಯ ಉಪ ವಿಭಾಗಾಧಿಕಾರಿ ಹೆಚ್.ಎಸ್ ಕಿರ್ತನ, ಯೋಜನೆ ನಿರ್ದೇಶಕರಾದ ಪ್ರಭಾಕರ್, ತಾಲೂಕು ಪರಿವೀಕ್ಷಕರುಗಳಾದ ಸ್ವಾಮಿ, ನಾಗರತ್ನ ಸೇರಿದಂತೆ ಇನ್ನಿತರರು ಹಾಜರಿದ್ದರು.

ಜನವರಿ 27ಕ್ಕೆ ಮಂಡ್ಯದಲ್ಲಿ ಪ್ರಜಾಧ್ವನಿ ಯಾತ್ರೆ..!

ಕಲ್ಯಾಣ ಕರ್ನಾಟಕದ ಮೇಲೆ ಮೋದಿ ಕಣ್ಣು

ತಮ್ಮನ್ನು ಮಾರಾಟ ಮಾಡಿಕೊಂಡಿರುವ ಶಾಸಕರಿಗೆ ಏನೆಂದು ಹೇಳುತ್ತೀರಿ?’: ಹರಿಪ್ರಸಾದ್

- Advertisement -

Latest Posts

Don't Miss