Friday, June 20, 2025

Latest Posts

ಬಿಜೆಪಿ ಪಕ್ಷಕ್ಕೆ ಫೈಟರ್ ರವಿ ಸೇರ್ಪಡೆ ವಿಚಾರ : ಮಂಡ್ಯದಲ್ಲಿ ಬೆಂಬಲಿಗರಿಂದ ಸುದ್ಧಿಗೋಷ್ಠಿ

- Advertisement -

ಮಂಡ್ಯ: ಬಿಜೆಪಿ ಪಕ್ಷಕ್ಕೆ ಫೈಟರ್ ರವಿ ಸೇರ್ಪಡೆ ವಿಚಾರವಾಗಿ ಮಂಡ್ಯದಲ್ಲಿ ಫೈಟರ್ ರವಿ ಬೆಂಬಲಿಗರಿಂದ  ಸುದ್ದಿಗೋಷ್ಠಿ ನಡೆಸಲಾಯಿತು. ಬಿಜೆಪಿ ಪಕ್ಷಕ್ಕೆ ಫೈಟರ್ ರವಿ ಸೇರ್ಪಡೆ ವಿಚಾರ ಸಮರ್ಥಿಸಿಕೊಳ್ಳಲು ಬಂದು ತಬ್ಬಿಬ್ಬಾದ ಬೆಂಬಲಿಗರು ರವಿ ಅವರ ಸಮಾಜ ಸೇವೆ ನೋಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಆದರೆ ಆಗದವರು ರವಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ರವಿ ಅವರ ಮೇಲಿನ ಪ್ರಕರಣಗಳು ಖುಲಾಸೆ ಆಗಿವೆ. ರೌಡಿಶೀಟರ್ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಕೆ.ಜಿ.ಎಫ್ ತಾತನ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ರೌಡಿಶೀಟರ್ ಆಕ್ಟೀವ್ ಇಲ್ಲದಿದ್ದರೆ ದಾಖಲೆ ನೀಡುವಂತೆ ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ದಾಖಲೆಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಬೆಂಬಲಿಗರ ಹಾರಿಕೆ ಉತ್ತರವನ್ನು ನೀಡಿದ್ದಾರೆ. ದಾಖಲೆಗಳಿಲ್ಲದೇ ಫೈಟರ್ ರವಿ ಸಮರ್ಥಿಸಿಕೊಳ್ಳಲು ಮುಂದಾದ ಬೆಂಬಲಿಗರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡ ಬಡಾಯಿಸಿದರು. ಇನ್ನೊಂದು ವಾರದಲ್ಲಿ ರೌಡಿಶೀಟರ್ ಸ್ಕ್ವಾಶ್ ಆದ ಬಗ್ಗೆ ದಾಖಲೆ ನೀಡುತ್ತೇವೆ. ಫೈಟರ್ ರವಿ ಅವರೇ ಖದ್ದು ಆ ದಾಖಲೆಗಳನ್ನು ನಿಮಗೆ ನೀಡುತ್ತಾರೆ. ನಿನ್ನೆಯಷ್ಟೇ ವಿಡಿಯೋ ಬೈಟ್ ಬಿಡುಗಡೆ ಮಾಡಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದ ಫೈಟರ್ ರವಿ. ನನ್ನ ಬಳಿ ದಾಖಲೆಗಳಿವೆ ಮಾಧ್ಯಮಗಳ ವಿರುದ್ಧ ಕೇಸ್ ಹಾಕುತ್ತೇನೆ ಎಂದು ರವಿ ಹೇಳಿದ್ದರು. ಆದರೆ ದಾಖಲೆ ತರದೆ ಇಂದು ಬೆಂಬಲಿಗರು ಸಮರ್ಥೆನೆಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ಫೈಟರ್ ರವಿ ಬೆಂಬಲಿಗರು ಹೇಳಿದ್ದಾರೆ.

ಒಣ ತ್ವಚೆ ಇರುವವರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ..!

ಯಾವುದೇ ವೆಚ್ಚವಿಲ್ಲದೆ ಕರಿಬೇವಿನಿಂದ ಕೂದಲಿನ ಸಮಸ್ಯೆಗಳಿಗೆ ಪರಿಹಾರ..!

- Advertisement -

Latest Posts

Don't Miss