Manipur : ಮಣಿಪುರದಲ್ಲಿ ಪೈಶಾಚಿಕ ಕೃತ್ಯ: ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ..!

Manipur News : ಮಣಿಪುರದಲ್ಲಿ ನಿರಂತಹ ಹಿಂಸಾಚಾರಗಳು ಎಲ್ಲೆ ಮೀರುತ್ತಿವೆ. ದಿನ ನಿತ್ಯ ಪೈಶಾಚಿಕ ಕೃತ್ಯವೆಸಗಿ ಮಣಿಪುರ ಸುದ್ದಿಯಲ್ಲಿದೆ.

ಮಣಿಪುರದಲ್ಲಿ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ಎಸಗಲಾಗಿದೆ. 21ಕ್ಕೂ ಹೆಚ್ಚು ಬಂಡುಕೋರರ ಗುಂಪು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಅತ್ಯಾಚಾರದಿಂದ ಮಹಿಳೆಯರನ್ನು ರಕ್ಷಿಸಲು ಬಂದ 19 ವರ್ಷದ ಸಹೋದರನನ್ನು ಬಂಡುಕೋರರ ಗುಂಪು ಹತ್ಯೆ ಮಾಡಿದೆ. ಈ ಘಟನೆ ಬಳಿಕ ಇಬ್ಬರು ಮಹಿಳೆಯರನ್ನು ರಸ್ತೆ ಮೂಲಕ ಬೆತ್ತಲೆ ಮೆರವಣಿಗೆ ಮಾಡಲಾಗಿದೆ.

ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದ ಜನ ಕೆರಳಿ ಹೋಗಿದ್ದಾರೆ. ಹೆಣ್ಣನ್ನು ಪೂಜಿಸೋ ನೆಲದಲ್ಲಿ ಹೆಣ್ಣಿಗೆ ಅವಮಾನವಾಗುತ್ತಿದ್ದರೂ ಇನ್ನೂ ಸುಮ್ಮನಿರುವುದು ಎಷ್ಟು ಸರಿ ಎಂದು ಮಣಿಪುರದಲ್ಲಿನ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ ಕುರಿತು ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದಾರೆ.

Kashi Yatra- 5 ಸಾವಿರ ಸಬ್ಸಿಡಿ ದರದಲ್ಲಿ ಕಾಶಿ ಪ್ರವಾಸ

Rain : ಗುಜರಾತ್ ನಲ್ಲಿ ಭಾರಿ ಮಳೆ, ನಗರಗಳು ಜಲಾವೃತ

Rahul Gandhi : ರಾಹುಲ್ ಗಾಂಧಿ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

About The Author