ಹಾಸನ: ವಿದ್ಯಾವಂತ ನಿರುದ್ಯೋಗಿಗಳಿಗೆ ನೆಟ್ ಮಾರ್ಕೆಟಿಂಗ್ ಮೂಲಕ ತರಬೇತಿ ನೀಡಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಕಬಳಿಸಿ ವಂಚಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹೌದು ವಿದ್ಯಾವಂತ ಯುವಕರನ್ನೇ ಗುರಿಯಾಗಿಸಿಕೊಂಡ ವಂಚಕರು ಹಾಸನದ ಎವಿಕೆ ಕಾಲೇಜು ಸಮೀಪದ ಇಂಡಿಯನ್ ಬ್ಯಾಂಕ್ ಹತ್ತಿರದ ಮಳಿಗೆಯಲ್ಲಿ ಬಾಡಿಗೆ ಕಛೇರಿ ಮಾಡಿದ್ದ ವಂಚಕರು ತರಬೇತಿ ನೀಡಿ ಉದ್ಯೋಗ ಕೊಡಿಸುತ್ತೇವೆ ಎಂದು ನೆಟ್ ಮಾರ್ಕೆಟಿಂಗ್ ಹೆಸರಲ್ಲಿ ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣ ವಂಚಿಸಿದ್ದಾರೆ.
ತರಬೇತಿ ನೀಡುತ್ತಾರೆಂದು ನಂಬಿ ಹಣ ಕಳೆದುಕೊಂಡ ಯುವಕ-ಯುವತಿಯರು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಹಾಸನ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಠಾಣಾ ಪೊಲೀಸರು ಇಬ್ಬರು ವಂಚಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನೊಂದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಬೆಂಬಲಕ್ಕೆ ನಿಂತಿದ್ದಾರೆ.
ಪೋಷಕರೇ ಎಚ್ಚರ..ಯುವಕ ಯುವತಿಯರೆ ಎಚ್ಚರ. ಅಕ್ಷರಸ್ಥ ವಿದ್ಯಾರ್ಥಿಗಳೆ ಮೋಸ ಹೋದರೆ ಹೇಗೆ.ಫಾರ್ಮುಲ್ ಬಟ್ಟೆ ಹಾಕೊರೆಲ್ಲ ಉದ್ಯೋಗಿಗಳಲ್ಲ.
**ಡ್ರೆಸ್ ನಿಂದಲೆ ಮಾಡ್ತಾರೆ ಮೋಡಿ
ಕೊನೆಗೆ ಹೋಗ್ತಾರೆ ಮಣ್ಣು ತೋಡಿ**
Farmers: ಸಂತೆಯಲ್ಲಿ ಹಸುಗಳನ್ನು ಕೊಳ್ಳಲು ಹೆದುತ್ತಿರುವ ಜನ..! ಯಾಕೆ ?
Flypver: ಚೆನ್ನಮ್ಮ ಸರ್ಕಲ್ ಬಳಿ ಪ್ಲೈಓವರ್ ನಿರ್ಮಾಣದ ಪಿಐಎಲ್ ರದ್ದು: ಹೈ ಕೋರ್ಟ್ ಆದೇಶ..!