Sunday, June 1, 2025

Latest Posts

ಸಿದ್ದರಾಮಯ್ಯ ನವರ ನಡೆಗೆ ಟಾಂಗ್ ಕೊಟ್ಟ ಎಂ.ಬಿ ಜಿರಲಿ

- Advertisement -

www.karnatakatv.net : ಬೆಳಗಾವಿ:  ವಿರೋಧ ಪಕ್ಷದವರು ತೆಲೆ ಕೆಟ್ಟಿರುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರು ಏನೇ ಹೇಳಿದರು ಅದು ಸುಳ್ಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಜಿರಲಿ ರಾಜ್ಯದಲ್ಲಿ ಯಡಿಯೂರಪ್ಪನವರು ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದಾರೆ. ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ,ಜೆ.ಪಿ.ನಡ್ಡಾ,ಅಮಿತ್ ಷಾ,ರಾಜನಾಥ ಸಿಂಗ್, ಇನ್ನು ಬಿಜೆಪಿ ನಾಯಕರು ಸಹ ಯಡಿಯೂರಪ್ಪ ಅವರನ್ನ ಹೊಗಳಿದ್ದಾರೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯನ್ನೆ ರಾಜಕೀಯ ಅಸ್ತ್ರವಾಗಿಟ್ಟುಕೊಂಡು ವಿರೋಧ ಪಕ್ಷದವರು ಹೇಳಿಕೆ ನೀಡುತ್ತಿರುವುದು ಸುಳ್ಳು ಹೇಳಿಕೆ ಎಂದರು.

ಬಸವರಾಜ ಬೊಮ್ಮಾಯಿ ಸಿಎಂ ಅಗಿರುವುದು ಸಂತೋಷದ ವಿಚಾರ: ಬಿಜೆಪಿ ರಾಜ್ಯ ವಕ್ತಾರ ಎಂ‌.ಬಿ.ಜಿರಲಿ ರಾಜ್ಯ ಬಿಜೆಪಿ  ಅಭಿವೃದ್ಧಿ ಹರಿಕಾರ ಯಡಿಯೂರಪ್ಪ ನವರು ಸ್ವ ಇಚ್ಛೆಯಿಂದ ರಾಜಿನಾಮೆ ನೀಡಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಳಿ ಅವರು ತಿಳಿಸಿದರು. ‌

ಕೇಂದ್ರದ ನಾಯಕರು ಯಾರಿಗೂ ನೀಡದ ಸ್ಥಾನಮಾನವನ್ನು ನೀಡಿದ್ದಾರೆ ಎಂದು ಸ್ವತಃ ಯಡಿಯೂರಪ್ಪ ನವರು ಹೇಳಿದ್ದಾರೆ. ಹೊಸ ಸಿಎಂ ಯಾವುದೇ ಗೊಂದಲ ಇಲ್ಲದೆ ಯಡಿಯೂರಪ್ಪನವರು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ಬೊಮ್ಮಾಯಿ ಅವರು ಸಿಎಂ ಆದ ಬಳಿಕ ನಾಲ್ಕು ರೀತಿ ವೇತನ ಘೋಷಣೆ ಮಾಡಿದ್ದಾರೆ. ರೈತರ ಮಕ್ಕಳ ಉನ್ನತ ಶಿಕ್ಷಣ ಪಡೆಯಪು ವೇತನ, ವೃಧ್ಯಾಪ ವೇತನ, ವಿಧವಾ ಮೇತನ, ಅಂಗವಿಕಲರ ವೇತನ, ಹೆಚ್ಚಿಗೆ ಮಾಡಿದ್ದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು. ‌

ಉ.ಕ ಭಾಗದಲ್ಲಿ ಮಹಾದಾಯಿ, ಕೃಷ್ಣ ಮೇಲ್ದಂಡೆ ಯೋಜನೆ, ಸುವರ್ಣ ಸೌಧದ ಉಪಯೋಗ ಆಗಬೇಕು.‌ ಸಿಎಂ ಬಸವರಾಜ ಬೊಮ್ಮಾಯಿ ಅವರು ಆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.‌

- Advertisement -

Latest Posts

Don't Miss