Sunday, October 20, 2024

Latest Posts

MB Pateel : ಯಾರೂ ಕಾನೂನಿಗಿಂತ ಮೇಲಲ್ಲ : ಸಚಿವ ಎಂ.ಬಿ ಪಾಟೀಲ್

- Advertisement -

Vijayapura News : ಸಾರ್ವಜನಿಕ ಗಣೇಶೋತ್ಸವಕ್ಕೆ ಪೊಲೀಸರ ಅನುಮತಿ ಪಡೆಯಬೇಡಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರೂ ಕಾನೂನಿಗಿಂತ ಮೇಲಲ್ಲ. ಕಾನೂನು ರಚನೆ ಮಾಡುವವರೇ ನಾವು. ಶಾಸಕರು ಕಾನೂನನ್ನು ಪಾಲಿಸಬೇಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಇವತ್ತು ಅಹಿತಕರ ಘಟನೆಗಳು ಆಗಬಾರದು. ಗಣೇಶೋತ್ಸವ ಆಚರಣೆ ವ್ಯವಸ್ಥಿತ ರೀತಿಯಲ್ಲಿ ಆಗಬೇಕು.

ಕಾರ್ಯಕ್ರಮ ಘನತೆ ಮತ್ತು ಗೌರವದಿಂದ ಆಗಬೇಕು. ಶ್ರದ್ಧೆಯಿಂದ ಆಗಬೇಕು. ಇದು ನಮ್ಮ ಸರಕಾರದ ಮತ್ತು ಜಿಲ್ಲಾಡಳಿತದ ಆಶಯ. ಅದಕ್ಕೆ ಇವತ್ತು ಶಾಂತ ರೀತಿಯಿಂದ, ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಮಾಡುವ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವನಾದ ನಾನೂ ಜೊತೆಗಿರುತ್ತೇನೆ ಎಂದು ಹೇಳಿದರು.

ಮಾಡಬೇಕಿರುವ ಕಾನೂನನ್ನು ಪಾಲನೆ ಮಾಡಿ. ಆದರೆ, ಸುಮ್ಮಸುಮ್ಮನೆ ಗೊಂದಲ ಸೃಷ್ಠಿ ಮಾಡುವ ಕೆಲಸ ಆಗಬಾರದು. ಯಾರು ಅನುಮತಿ ಕೇಳುತ್ತಾರೋ ಅವರಿಗೆ ತಕ್ಷಣ ಅನುಮತಿ ಕೊಡುವಂತೆ ಅಧಿಕಾರಿಗಳಿಗೆ ನಾನು ಸೂಚನೆ ಕೊಡುತ್ತೇನೆ ಎಂದು ಅವರು ತಿಳಿಸಿದರು.

Ganesha Fest : ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಕಲ ತಯಾರಿ

Police : ಮಗ ಪೋಲಿ ಅಮ್ಮ ಪೊಲೀಸ್ : ಮಗನ ಪುಂಡಾಟಿಕೆಗೆ ತಾಯಿ ಕುಮ್ಮಕ್ಕಿಗೆ ಎತ್ತಂಗಡಿ ಶಿಕ್ಷೆ

Basangouda Patil Yatnal : ಜನವರಿಗೆ ಕಾಂಗ್ರೆಸ್ ಸರ್ಕಾರ ಪತನ, ಅದಕ್ಕೆ ವಿಪಕ್ಷ ನಾಯಕ ಆಯ್ಕೆ ಮಾಡಿಲ್ಲ: ಯತ್ನಾಳ್

- Advertisement -

Latest Posts

Don't Miss