Sunday, September 8, 2024

Latest Posts

ನಿರಾಣಿಗೆ ಬಿಎಸ್ವೈ ಬೇಡವಾದ್ರಾ…?

- Advertisement -

www.karnatakatv.net : ತುಮಕೂರು: ಯಡಿಯೂರಪ್ಪ ಸಿಎಂ ಆಗಿದ್ದಾಗ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರೇ ಈಗ ಅವರ ಬಗ್ಗೆ ಮಾತಾಡೋಕೆ ಹಿಂದೇಟು ಹಾಕ್ತಿದ್ದಾರೆ ಅನ್ನೋ ಪ್ರಶ್ನೆಗೆ ಸಚಿವ ಮುರುಗೇಶ್ ನಿರಾಣಿ ನಡೆ ಕಾರಣವಾಗಿದೆ.

ಹೌದು, ರಾಜ್ಯದಲ್ಲಿ ಬಿಜೆಪಿ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದ ಯಡಿಯೂರಪ್ಪ ಬಗ್ಗೆ ಮಾತಾಡೋದಕ್ಕೆ ಇವತ್ತು ಸಚಿವ ಮುರುಗೇಶ್ ನಿರಾಣಿ ಹಿಂದೇಟು ಹಾಕಿದ್ರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದು ತುಮಕೂರಿನ ಪುಡ್ ಪಾರ್ಕ್ ಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ್ರು.

 ಅಧಿಕಾರಿಗಳ ಜೊತೆ ಸಮಾಲೋಚನೆ ಬಳಿಕ ಯಡಿಯೂರಪ್ಪನವರನ್ನ ಮುನ್ನೆಲೆಗೆ ತರುವ ಕುರಿತ ಸುದ್ದಿಗಾಗರ ಪ್ರಶ್ನೆಗೆ ಉತ್ತರಿಸಿದ ನಿರಾಣಿ, ನಾನು ಕೈಗಾರಿಕಾ ಸಚಿವ, ನನ್ನ ಬಗ್ಗೆ ಏನಾದ್ರೂ ಪ್ರಶ್ನೆ ಇದ್ರೆ ಕೇಳಿ, ಅವರ ಬಗ್ಗ ಮಾತಾಡೋಕೆ ಪಕ್ಷದ ವರಿಷ್ಟರಿದ್ದಾರೆ ಅಂತ ನೇರವಾಗಿ ಉತ್ತರಿಸಿದ್ರು.   

ಇನ್ನು ಬಿಎಸ್ವೈ ಸಿಎಂ ಆಗಿದ್ದಾಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿ ಬಾಯಿಂದ ಬಂದ ಈ ಮಾತು ಈಗ ಬೇರೆಯೇ ಅರ್ಥ ಕೊಡ್ತಿದೆ.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ-  ತುಮಕೂರು

- Advertisement -

Latest Posts

Don't Miss